Alma CornerBlog

ಜಾಗತೀಕ ಬೆಳವಣಿಗೆಗೆ ಭಾಷೆಯೆ ಮುಳುವಾಗಬಾರದು…!

ಇತ್ತೀಚಿನ ದಿನಗಳಲ್ಲಿ ನಮ್ಮ ಬೆಂಗಳೂರಿನಲ್ಲಿ ಹಿಂದಿ, ತಮಿಳು ತೆಲಗು ಸೇರಿದಂತೆ ಪರಭಾಷಿಕರ ದಟ್ಟಣೆ ಜಾಸ್ತಿಯಾಗಿದೆ ಏಕೆಂದರೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಹೊರ ರಾಜ್ಯದವರಿದ್ದಾರೆ, ಹೀಗಾಗಿ ಬೆಂಗಳೂರಿನಲ್ಲಿ ಇರುವ ಪರಭಾಷಿಕರ ವರ್ತನೆ ನಮ್ಮಿಂದಲೆ ಬೆಂಗಳೂರು ನಾವಿಲ್ಲ ಎಂದರೆ ಬೆಂಗಳೂರೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಮೀತಿಮಿರಿದೆ. ಈ ರೀತಿ ವರ್ತಿಸುತ್ತಿರುವವರಿಗೆ ಯಾರೂ ಕಡಿವಾಣ ಹಾಕುವವರೆ ಇಲ್ಲಾದಂತಾಗಿದೆ .

ಈ ಹಿಂದೆ ಹೊರ ರಾಜ್ಯದಿಂದ ಬಂದ ಸುಗಂಧ ಶರ್ಮಾ ಎಂಬಾಕೆ ನಾವು ಬೆಂಗಳೂರು ಬಿಟ್ಟರೆ ನಿಮ್ಮ ನಗರ ಖಾಲಿ ಆಗುತ್ತೆ ಎಂದು ಅವಹೇಳನ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಅದೇತರ ಮತ್ತೊಂದು ಘಟನೆ ಹಳೆಯ ಏರಪೊರ್ಟ್‌ ರಸ್ತೆಯ ಮುರುಗೇಶ್‌ಪಾಳ್ಯದ ಎನ್‌ ಎಸ್‌ ಆರ್ಕೆಡ್‌ ಬಳಿ ಏ.17 ರಂದು ಶನಿವಾರ ನಡೆದಿದೆ,  ಇದೆ ತರಹದ ಇನ್ನು ಬೆಳಕಿಗೆ ಬರದ ಅನೇಕ  ವಿವಾದಗಳು ನಮ್ಮ ಬೆಂಗಳೂರು ನಗರದಲ್ಲಿ ನಡೆಯುತ್ತವೆ ಹೀಗಾಗಿ ಬೆಂಗಳೂರಿನಲ್ಲಿ ಅನಿಯಂತ್ರಿತ ವಲಸೆಗಾರರಿಂದಾಗಿ ಕರ್ನಾಟಕ ಕಾನೂನು ಸುವ್ಯವಸ್ತೆಗೆ  ದೊಡ್ಡ ಮಟ್ಟದ ಪೆಟ್ಟು ಬೀಳುತ್ತಿದೆ, ಹೊರರಾಜ್ಯದಿಂದ ಬಂದವರಿಂದ ಕೊಲೆ ಸುಲಿಗೆ ದರೋಡೆ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.  ಹೊರರಾಜ್ಯದಿಂದ ಬಂದು ಇಲ್ಲಿಯ ಉದ್ಯೊಗದಿಂದ ಜೀವನ ಕಟ್ಟಿಕೊಂಡು ಇಲ್ಲಿ ಅವರ ಅವಶ್ಯತೆಗಳನ್ನ ಪೂರೈಸಿಕೊಂಡ ನಂತರ ಕನ್ನಡಿಗರ ಮೇಲೆಯೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಜೊತೆಗೆ ಕನ್ನಡವನ್ನೆ ತಿರಸ್ಕರಿಸಿ ಹಿಂದಿ ಮಾತನಾಡುವಂತೆ ಹೆಳುತ್ತಿದ್ದರೆ ಇದು ಎಷ್ಟರ ಮಟ್ಟಿಗೆ ಸರಿ ?

ಈ ವಿಷಯ ಕೆಲವುದಿನಗಳಿಂದ ಸಾಮಾಜಿಕ ಮಾದ್ಯಮದಲ್ಲೂ ಕೂಡ ಸಾಕಷ್ಟೂ ಟೀಕೆ ಮತ್ತು ಜನರ ಆಕ್ರೊಶಕ್ಕೆ ಗುರಿಯಾಗಿದೆ.

ಈಗ ನಾವು ಯಾವುದೆ ಒಂದು ವಿಷಯ ಮಾತಾಡಬೇಕು ಅಂದ್ರೆ ಅದರ ಹಿನ್ನಲೆ ತಿಳಿದುಕೊಳ್ಳೊದು ಮುಖ್ಯ,

ಹಾಗಿದ್ದರೆ ಮೊದಲು ಬಾಷಾ ಆಧಾರಿತ ರಾಜ್ಯಗಳು ಯಾಕೆ ಮತ್ತು ಯಾವಾಗ ರೂಪುಗೊಂಡವು ಮತ್ತು ಹಿಂದಿ ಅಧಿಕೃತ ರಾಷ್ಟ್ರ ಭಾಷೆನಾ ಅನ್ನೊದನ್ನು ತಿಳ್ಕೊಳ್ಳೊಣ ಬನ್ನಿ.

ನಮ್ಮ ದೇಶದಲ್ಲಿ ಭಾಷೆ ಆಧಾರಿತ ರಾಜ್ಯಗಳನ್ನು ಮಾಡಿದ ಉದ್ದೇಶವೆಂದರೆ,

ಭಾಷೆ ಅಂದ್ರೆ ಕೇವಲ ಸಂವಹನ ಸಾಧನವಲ್ಲ ಭಾಷೆ ಜನರ ಅಸ್ಮಿತೆ , ಸಂಸ್ಕೃತಿ ,ಇತಿಹಾಸ ಮತ್ತು ಅಸ್ಥಿತ್ವಕ್ಕೆ ಸಂಬಂಧಪಟ್ಟ ವಿಷಯ.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ,ಬೇರೆ-ಬೇರೆಯಾಗಿದ್ದ ಹಲವಾರು ಪ್ರಾಂತ್ಯಗಳನ್ನು, ಬ್ರಿಟೀಷ್‌ ಪ್ರಾಂತ್ಯಗಳು, ರಾಜವಂಶಗಳನ್ನು, ಹಲವು ರಾಜ್ಯಗಳನ್ನು ಸೇರಿಸಿ ಒಂದುಗೂಡಿಸಲಾಯಿತು, ಭಾರತ ಆ  ಸಮಯದಲ್ಲಿ ರಾಜ್ಯಗಳನ್ನು ಭಾಷೆ ಆಧಾರಿತವಾಗಿ ಅಲ್ಲ, ಬದಲಾಗಿ ಆಡಳಿತದ ಅನುಕೂಲಕ್ಕೆ ಬೇರೆಯಾಗಿ ವಿಭಾಗ ಮಾಡಲಾಗಿತ್ತು.

ಆದರೆ ಕೆಲವು ದಿನಗಳ ನಂತರ ಅಂಧ್ರ ಪ್ರದೇಶದ ಜನರು ದೆಶದಲ್ಲಿ ಮೊದಲ ಭಾಷಾ ಹೊರಾಟ ನಡೆಸಿದರು.

ಅಂಧ್ರ ಪ್ರದೇಶದ ಜನರು ತಮ್ಮ ಭಾಷೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯದ ಆಗ್ರಹದಲ್ಲಿ ಭಾರಿ ಹೋರಾಟ ನಡೆಸಿ ಅಂದಿನ ಮುಖಂಡ ಪೊಟ್ಟಿಸ್ರೀರಾಮಲು ಅವರು ತೆಲುಗು ರಾಜ್ಯಕ್ಕಾಗಿ ಉಪವಾಸ ಕೂಡ ಮಾಡಿದರು.

ಅವರು ಉಪವಾಸದಿಂದ ಸಾವನ್ನಪ್ಪಿದ ನಂತರ, 1953ರಲ್ಲಿ ಆಂಧ್ರ ಪ್ರದೇಶ ರಾಜ್ಯವನ್ನು ಪ್ರತ್ಯೇಕವಾಗಿ ರೂಪಿಸಲಾಯಿತು ಹಿಗಾಗಿ ಆಂದ್ರ ಪ್ರದೇಶವು ನಮ್ಮ ದೇಶದಲ್ಲಿ ಇದು ಭಾಷಾ ಆಧಾರದ ಮೇಲಿ ರೂಪುಗೊಂಡ ಮೊದಲ ರಾಜ್ಯವಾಯಿತು

ಇದಾದ 3 ವರ್ಷಗಳ ನಂತರ ಅಂದ್ರೆ 1956 States Reorganisation Act ಅಡಿಯಲ್ಲಿ ಭಾರತದ ಬಹುತೇಕ ಭಾಗವನ್ನು ಭಾಷೆಯ ಆಧಾರದ ಮೇಲೆ ಪುನರ್ ರಚನೆ ಮಾಡಲಾಯಿತು

ಇದು ಬಾಷಾ ರಚನೆಯ ಮಹತ್ವದ ಕ್ರಮವಾಗಿದೆ

ಹೀಗಾಗಿ ನಮ್ಮ ದೇಶದಲ್ಲಿ  ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್ ನಂತಹ ಮೊದಲಾದ ರಾಜ್ಯಗಳು ಪ್ರತ್ಯೇಕ ಭಾಷಾ ರಾಜ್ಯವಾಗಿ ರೂಪಗೊಂಡವು.

ಇನ್ನ ಹಿಂದಿ ನಮ್ಮ ರಾಷ್ಟ್ರ ಭಾಷೆನಾ ಅಂತ ನೊಡೊದಾದ್ರೆ  

ಇಲ್ಲ, ಹಿಂದಿ ಅನ್ನು ಭಾರತದಲ್ಲಿ ರಾಷ್ಟ್ರಭಾಷೆ ಎಂದು ಘೋಷಿಸಲ್ಪಟ್ಟಿಲ್ಲ. ಸತ್ಯ ಏನು ಅಂದ್ರೆ ಭಾರತದಲ್ಲಿ ರಾಷ್ಟ್ರಭಾಷೆ National Language ಎಂಬ ನಿಯಮಾತ್ಮಕ ಪದವೇ ಇಲ್ಲ ಸಂವಿಧಾನದ 343ನೇ ಆಧ್ಯಾಯದಲ್ಲಿ, ಹಿಂದಿಯನ್ನು ಕೇವಲ “ರಾಜ್ಯಭಾಷೆ” (Official Language) ಎಂದು ಮಾತ್ರ ಘೋಷಿಸಲಾಗಿದೆ.

ಮತ್ತು ಅದೆ ತರ ನಮ್ಮ ದೇಶದಲ್ಲಿ ಇಂಗ್ಲಿಷ್ ಕೂಡಾ ಆಡಳಿತ ಭಾಷೆಯಾಗಿದೆ. ಮತ್ತು ಭಾರತೀಯರು ತಮಗೆ ಅನುಕೂಲವಾದ ಭಾಷೆ ಬಳಸಬಹುದೆಂಬ ಹಕ್ಕು ಕೂಡ ಇದೆ ಅದು ಸಂವಿಧಾನಾತ್ಮಕ ಹಕ್ಕು ಹೀಗಾಗಿ ನಮ್ಮ ದೇಶದಲ್ಲಿ ಹಿಂದಿ ರಾಷ್ಟ್ರ ಭಾಷೆ ಅಲ್ಲ .

ಹೀಗಾದ್ರೆ ಇದಕ್ಕೆ ಪರಿಹಾರವೇನು ಅಂತ ನೊಡಾದಾದ್ರೆ

ಪ್ರತಿ ರಾಜ್ಯದಲ್ಲು ಅವರವರ ಸ್ಥಳಿಯ ಭಾಷೆಗೆ ಮೊದಲ ಸ್ಥಾನ ಮತ್ತು ಆದ್ಯತೆ ಕೊಡಬೇಕು ಮತ್ತು ತಮ್ಮ ತಮ್ಮ ರಾಜ್ಯದ ಮಳಿಗೆಗಳಿಗೆ ಮೆಟ್ರೊ ಮತ್ತು ಇತರ ಸಾರಿಗೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ಮೊದಲು ಅವರವರ ಭಾಷೆ ಅಂದರೆ ನಮ್ಮ ಕರ್ನಟಕದಲ್ಲಿ ಕನ್ನಡ ಮಹಾರಾಷ್ಟ್ರದಲ್ಲಿ ಮಾರಾಠಿ ಗುಜರಾತ್‌ನಲ್ಲಿ ಗುಜರಾತಿ ಪಂಜಾಬ್ನಲ್ಲಿ ಪಂಜಾಬಿಗೆ ಆದ್ಯತೆ ಕೊಡಲಿ ಆಮೇಲೆ ಬೇರೆ ಭಾಷೆಗಳಿಗೆ

ಕೇಂದ್ರ ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆ ಭಾಷಾ ಪರಿಶೀಲನೆ ನಡೆಸಿ  ನೀತಿ ರೂಪಿಸಬಹುದು.  

ಹೊರ ರಾಜ್ಯದಿಂದ ಬಂದವರಿಗೆ ಕನ್ನಡ ಕಲಿಸುವುದು ಆದರೆ ಬಲವಂತವಿಲ್ಲದೆ ಪ್ರೋತ್ಸಾಹದಿಂದ ಕಲಿಯಲು ಅನುಕೂಲ ಮಾಡಿಕೊಡುವುದು

ಭಾಷೆ ಆಧಾರಿತ ರಾಜ್ಯ ರೂಪಣೆಯಾಗಿರೊದು ಅದರ ಸಂಸ್ಕೃತಿ ಇತಿಹಾಸ ಅದರ ಹಿನ್ನಲೆ ಊಳಿಸುವುದಕ್ಕೆ ಹೀಗಾಗಿ ಹೊರ ರಾಜ್ಯದಿಂದ ಬಂದವರು ಕೂಡ ಇದನ್ನೂ ಅರ್ಥೈಸಿಕೊಂಡು ಭಾಷೆಗಾಗಿ ವಿವಾದ ಮಾಡದೆ ಅದನ್ನ ಕಲಿಯುವ ಪ್ರಯತ್ನ ಪಡುವುದು.

ಮತ್ತು ದೇಶದ ಬೆಳವಣಿಗೆ ಮತ್ತು ʼʼಗ್ಲೊಬಲೈಜೆಶನ್‌ʼʼ ಆಗಲು ಎಲ್ಲ ಬಾಷೆಗಳಿಗೂ ಸಮಾನ ಹಕ್ಕೂ ಸಿಗಬೇಕು.

ದೇಶದ ಬೆಳವಣಿಗೆಗೆ ಒಗ್ಗಟ್ಟು ಮುಖ್ಯ ಆದರೆ ಆ ಒಗ್ಗಟ್ಟು ಭಾಷೆಗಳ ಕಾರಣದಿಂದ ಒಡೆಯಬಾರದು

ಒಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೂ ಅದರದೆ ಆದಂತಹ ಭಾಷೆಗಳಿವೆ ಹೊರರಾಜ್ಯದವರು ನಮ್ಮ ರಾಜ್ಯಕ್ಕೆ ಬಂದಾಗ ಇಲ್ಲಿನ ನಡೆ ನುಡಿ ಸಂಸ್ಕ್ರುತಿಯ ಬಗ್ಗೆ ಕಲಿಯಲಿ ಅದೆ ತರ ನಾವು ಬೇರೆ ರಾಜ್ಯಗಳಿಗೆ ಹೊದರೆ ಅಲ್ಲಿನ ನಡೆ ನುಡಿ ಆಚಾರ ವಿಚಾರಗಳನ್ನ ಕಲಿಯೋಣ ಭಾಷಾ ಸಮಾನತೆ ಎಂಬುದು ಬರಿ ಕಾನೂನು ಅಲ್ಲ ಅದು ನಮ್ಮ ಭಾರತದ ಸಂಸ್ಕೃತಿ  ಭಾಷಾ ಭದ್ರತಾ ನೀತಿ ಅಂದ್ರೆ ಒಂದು ಭಾಷೆಯನ್ನು ಇನ್ನೊಂದು ಭಾಷೆಗೋಸ್ಕರ ತುಳಿಯುವುದು ಅಲ್ಲ  ಎಲ್ಲ ಭಾಷೆಗೂ ಅದರದೆ ಆದಂತಹ  ಒಂದು ಸ್ಥಾನ ಗೌರವ ಇದೆ ಅದನ್ನ ವಿವಾದದ ಮೂಲಕ ಒಡೆದು ಹಾಳು ಮಾಡುವುದು ಬೇಡ.

ಶಿಲ್ಪಾ ಹೊಸಮನಿ
ಅಲ್ಮಾ ಮಿಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button