ಬಲಿ ಪಾಡ್ಯಮಿ ಹಬ್ಬ: ಪ್ರತಿ ವರ್ಷ ಭೂಮಿಗೆ ಬರುವುದ್ಯಾಕೆ ಬಲಿ ಚಕ್ರವರ್ತಿ..?!

ದೀಪಾವಳಿ ಹಬ್ಬದ ಮರುದಿನ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಲಿ ಪಾಡ್ಯಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯಲ್ಲಿ ಬಹಳ ವಿಶೇಷವಾದ ಕಥೆ ಇದೆ – ದೈತ್ಯ ರಾಜನಾದ ಬಲಿ ಚಕ್ರವರ್ತಿ ಮತ್ತು ವಾಮನ ಅವತಾರದ ಮಹತ್ವದ ಸ್ಮರಣೆ ಇದಾಗಿದೆ.
ಬಲಿಚಕ್ರವರ್ತಿ:
ಬಲಿಚಕ್ರವರ್ತಿ, ತನ್ನ ಪರಾಕ್ರಮದಿಂದ ಪ್ರಪಂಚವನ್ನೇ ವಶಪಡಿಸಿಕೊಂಡ ಮಹಾನ್ ದೈತ್ಯ ರಾಜನಾಗಿದ್ದನು. ಇಂದ್ರನ ಸ್ಥಾನವನ್ನೂ ಆಕ್ರಮಿಸಿ, ಸ್ವರ್ಗವನ್ನೇ ತನ್ನ ಅಧೀನಕ್ಕೆ ತಂದ ಬಲಿ, ತನ್ನ ಗುರು ಶುಕ್ರಾಚಾರ್ಯರ ಸಲಹೆಯಂತೆ ಶತಾಶ್ವಮೇಧ ಯಜ್ಞವನ್ನು ನಡೆಸಲು ಮುಂದಾಗಿದ್ದರು. ಇಂಥ ಅಸಾಧಾರಣ ಶಕ್ತಿಯನ್ನು ಹೊಂದಿದ್ದ ಬಲಿಯ ಬೆನ್ನತ್ತಿದ ಇಂದ್ರನು, ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಮಹಾವಿಷ್ಣುವಿನ ಸಹಾಯವನ್ನು ಕೋರಿದ.
ಶ್ರೀಹರಿಯ ವಾಮನ ರೂಪ:
ವಿಷ್ಣುವಿನ ವಾಮನ ಅವತಾರವು ಬಲಿಯನ್ನು ಪರೀಕ್ಷಿಸಲು ಹೊಸ ಆಯಾಮವನ್ನು ಸೃಷ್ಟಿಸಿತು. ಕುಬ್ಜ ರೂಪದಲ್ಲಿ ಮೂಡಿದ ವಾಮನನು, ಬಲಿಯ ಯಜ್ಞದಲ್ಲಿ ಪ್ರತ್ಯಕ್ಷನಾಗಿ ಕೇವಲ ಮೂರು ಹೆಜ್ಜೆಗಳ ಭೂಮಿಯನ್ನು ಕೇಳಿದ. ಬಲಿಯ ಗುರು ಶುಕ್ರಾಚಾರ್ಯರು ಇದಕ್ಕೆ ವಿರೋಧ ತೋರಿದರೂ, ಬಲಿ ತನ್ನ “ದಾನ ಧರ್ಮ”ವನ್ನು ಪಾಲಿಸಲು ಮುಂದಾದನು.
ಮೂರು ಲೋಕ ಹಾಗೂ ಮೂರು ಪಾದ:
ವಾಮನನು ತಕ್ಷಣ ತ್ರಿವಿಕ್ರಮ ರೂಪವನ್ನು ತಾಳಿಕೊಂಡು ಮೊದಲ ಹೆಜ್ಜೆಯಿಂದ ಪ್ರಪಂಚವನ್ನು ಮುಚ್ಚಿ, ಎರಡನೇ ಹೆಜ್ಜೆಯಿಂದ ಆಕಾಶವನ್ನು ಮುಚ್ಚಿದ. ಮೂರನೇ ಹೆಜ್ಜೆಗೆ ತಾನೆ ತಲೆ ಒಡ್ಡಿದ ಬಲಿಚಕ್ರವರ್ತಿ, ಶಾಶ್ವತವಾಗಿ ತನ್ನ ತ್ಯಾಗ ಧರ್ಮಕ್ಕೆ ಹೆಸುರುವಾಸಿಯಾದನು.
ಬಲಿ ಪಾಡ್ಯಮಿ:
ಶ್ರೀಹರಿಯ ಕೃಪೆಯಿಂದ ಪಾತಾಳ ಲೋಕದಲ್ಲಿ ಬಲಿಯು ಆಳುವ ಅವಕಾಶವನ್ನು ಪಡೆದನು, ಮತ್ತು ಪ್ರತಿ ವರ್ಷ ಬಲಿ ಪಾಡ್ಯಮಿಯ ದಿನ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿ ಮಾಡುವ ಅನನ್ಯ ಅವಕಾಶವನ್ನು ಪಡೆದನು.
ಈ ಹಬ್ಬದ ಮೂಲಕ ನಾವೀಗಲೂ ಬಲಿಯ ಶ್ರೇಷ್ಠತೆ ಮತ್ತು ವಿಷ್ಣು ಬೋಧಿಸಿದ ಪರಮಾರ್ಥವನ್ನು ನೆನಪಿಸಿಕೊಳ್ಳುತ್ತೇವೆ.