BengaluruCinemaEntertainment

ಆಗಸ್ಟ್ 09ಕ್ಕೆ ಬರುತ್ತಿದ್ದಾನೆ ಭೀಮ.

ಬೆಂಗಳೂರು: ಕನ್ನಡ ಚಿತ್ರರಂಗದ ಕರಿ ಚಿರತೆ ಎಂದೇ ಖ್ಯಾತಿ ಪಡೆದಿರುವ, ದುನಿಯಾ ವಿಜಯ್ ಅವರು ಅಭಿನಯಿಸಿ, ಬರೆದು ನಿರ್ದೇಶಿಸಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಮತ್ತು ಜಗದೀಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಅವರು ನಿರ್ಮಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮಾಡಿದ್ದ ಚಿತ್ರತಂಡವು ಇದೇ ಬರುವ ಆಗಸ್ಟ್ 09ಕ್ಕೆ ಭೀಮ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ಈ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ಅಶ್ವಿನಿ, ಕಲ್ಯಾಣಿ ರಾಜು, ಕಪ್ಪು ಡ್ರ್ಯಾಗನ್ ಮಂಜು, ಗಿಳಿ ಗಿಳಿ ಚಂದ್ರು ಅಭಿನಯಿಸಿದ್ದಾರೆ. ಚರಣ್ ರಾಜ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button