ಬಜೆಟ್ಗಳೇನೊ ಬರುತ್ತಿವೆ,, ಆದರೆ ರೈತರ ಕಷ್ಟಗಳನ್ನು ಕೇಳುವವರ್ಯಾರು..?

ಪ್ರತಿ ಸರ್ಕಾರ ಬಂದಾಗಲೂ ಬಜೆಟ್ ಮಂಡಿಸುವ ಸಮಯ ಬಂದಾಗ ಪ್ರತಿ ಸರ್ಕಾರವೂ (ಕೇಂದ್ರ ಅಥವ ರಾಜ್ಯ ಸರ್ಕಾರ) ಬಜೆಟ್ಅನ್ನು ಯಶಸ್ವಿಯಾಗಿ ಮಂಡಿಸುತ್ತದೆ, ಅದರಲ್ಲಿ ಎಲ್ಲವು ಸಾವಿರ ಕೋಟಿಗಳಲ್ಲಿ ಲೆಕ್ಕ ಇರುತ್ತವೆ ಅದರಲ್ಲಿ ಶೇ.50% ಅಷ್ಟು ಕೆಲವು ವರ್ಗಗಳ ಅಭಿವೃದ್ದಿಗೆ ಮೀಸಲಾಗಿದೆ, ಇನ್ನು ಉಳಿದ ಬಜೆಟ್ನ ಹಣದಲ್ಲಿ ರಸ್ತೆ ಕಾಮಗಾರಿ, ಶಿಕ್ಷಣ, ಆರ್ಥಿಕ ಯೋಜನೆಗಳು, ರೈತಕಲ್ಯಾಣ ಯೋಜನೆಗಳ ಬಳಕೆಗೆ ಬಳಸುವುದು ವಾಡಿಕೆ, ಉದಾಹರಣೆಗೆ ಹೇಳಬೇಕೆಂದರೆ ಗ್ರಾಮೀಣ ಬ್ಯಾಂಕ್ಗಳಲ್ಲಿ ಸಾಲದ ಮೊತ್ತವನ್ನು ಹೆಚ್ಚಿಸುವುದು, ಕೆಲವೊಂದು ಬೆಳೆಗಳಿಗೆ ಪ್ರೋತ್ಸಾಹಧನ ನೀಡುವುದು ಇತರೆ ಆಗಿದೆ,
ಅದರಲ್ಲಿ ಪ್ರಮುಖವಾಗಿ ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆ ಈ ಯೋಜನೆಯ ಅಡಿಯಲ್ಲಿ ಸುಮಾರು 9.8 ಕೋಟಿ ರೈತರು ಪ್ರತಿ 4 ತಿಂಗಳಿಗೊಮ್ಮೆ ರೂ.2000 ವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಪಡೆಯುತ್ತಿದ್ದಾರೆ. ಇದು ರೈತರ ಆರ್ಥಿಕತೆಗೆ ಸಹಾಯ ಮಾಡುತ್ತಿದೆ.

ಇಂತಹ ಕೆಲವೊಂದು ಯೋಜನೆಗಳನ್ನು ಬಿಟ್ಟು, ಒಬ್ಬ ರೈತನ ಸ್ಥಾನದಲ್ಲಿ ನಿಂತು ಯೋಚಿಸುವುದಾದರೆ ಇದ್ಯಾವ ಯೋಜನೆಯು ಅವನಿಗೆ ನೂರಕ್ಕೆ ನೂರರಷ್ಟು ಲಭಿಸುವುದಿಲ್ಲ.

ಹಾಗಾದರೆ ಅಂತಹ ರೈತ ಕಲ್ಯಾಣ ಯೋಜನೆಗಳು ಯಾವುವು ಎಂದು ನೊಡುವುದಾದರೆ
-ತಾಲ್ಲೂಕು ಕಛೇರಿಗಳಲ್ಲಿ ರೈತರಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ
ಒಬ್ಬ ಸಾಮಾನ್ಯ ರೈತ ಅವನ ಜಮೀನಿನ ಸರ್ವೇಯನ್ನು ಮಾಡಿಸಲು ಎಕರೆಯ ಆಧಾರವಾಗಿ ಹಣವನ್ನು ಕಟ್ಟಿದರು ಸಹ ಸುಲಭಕ್ಕೆ ಆ ಕೆಲಸ ಆಗುವುದಿಲ್ಲ, ಒಂದು ಪಕ್ಷ ಆದರೂ ಅಳತೆಯಲ್ಲಿ ಹೆಚ್ಚು ಕಡಿಮೆ ಇದ್ದಾಗ ಅದನ್ನು ಸರಿಪಡಿಸಲು ಇಂತಿಷ್ಟು ಹಣವನ್ನು ಸರ್ವೇ ಅಧಿಕಾರಿಗೆ ನೀಡಬೇಕು ಇಲ್ಲವಾದಲ್ಲಿ ಆ ಕೆಲಸ ಹಾಗೆ ಬಾಕಿಉಳಿಯುತ್ತದೆ ಅಥವ ತಿಂಗಳುಗಟ್ಟಲೆ ಕಛೇರಿಗೆ ಅಲೆಯಬೇಕು ಅಥವ ಅಲ್ಲಿಯೂ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಬೇಕು ಈ ಹಣ ರೈತನಿಗೆ ನಮ್ಮ ಸರ್ಕಾರ ನೀಡುವುದಿಲ್ಲ ಈ ವಿಷಯದ ಬಗ್ಗೆ ಚರ್ಚೆ ನಡೆಯುವುದಿಲ್ಲ.
-ತಾಲ್ಲೂಕು ಕಛೇರಿಗಳಿಗೆ ತಿರುಗಿ ಅವನ ಸಮಯ ವ್ಯರ್ಥವಾಗುತ್ತದೆ
ಜಮೀನು ಹೊಂದಿರುವವನ ಪಹಣಿಯಲ್ಲಿ ಏನೆ ತಪ್ಪಿದ್ದರು ಅದನ್ನು ಸರಕಾರಿ ಅಧಿಕಾರಿಗಳು ಎಸಗಿದ್ದರು ಅದನ್ನು ಸರಿಪಡಿಸಲು ರೈತನೆ ಅವನ ಕೆಲಸ ಬಿಟ್ಟು ಖುದ್ದಾಗಿ ಹೊಗಬೇಕು ಇದರಿಂದ ಹಣ ಮತ್ತು ಸಮಯ ಎರಡು ವ್ಯರ್ಥವಾಗುತ್ತದೆ, ಇದನ್ನು ಅವನ ಜೇಬಿನಿಂದಲೆ ಬರಿಸಬೇಕು

-ಜಮೀನಿಗೆ ಸಂಬಂದಪಟ್ಟ ಜಗಳವಾದರೆ ಅದಕ್ಕೆ ಅವರೆ ಕೋರ್ಟ್ಗೆ ಹಣ ಕಟ್ಟಿ ಬಗೆಹರಿಸಿಕೊಳ್ಳಬೇಕು ಇದಕ್ಕೆ ಪೋಲೀಸ್ಇಲಾಖೆ ಮಧ್ಯಸ್ಥಿಕೆಯನ್ನು ವಹಿಸುವುದಿಲ್ಲ(ಕಾರಣ ಸಿವಿಲ್ ವಿವಾದ) ಇದರ ಪರಿಣಾಮ ತಪ್ಪು ಮಾಡದ ರೈತರು ಹಣ ಮತ್ತು ಸಮಯ ಎರಡನ್ನು ಕಳೆದುಕೊಳ್ಳಬೇಕು ಇದು ಅವರ ಆರ್ಥಿಕ ಸಂಕಷ್ಟಕ್ಕೂ ಕಾರಣವಾಗಬಹುದು ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಂಡರೆ ಎಷ್ಟೋ ಭೂ ಕಬಳಿಕೆದಾರರ ಹೆಡೆಮುರಿ ಕಟ್ಟಬಹುದು ಹಾಗೂ ಎಷ್ಟೊ ರೈತ ಕುಟುಂಬಗಳನ್ನು ಉಳಿಸಬಹುದು
-ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ
ಸೂಕ್ತ ಬೆಲೆ ಸಿಗದ ಕಾರಣ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಆದ್ದರಿಂದ ಬೆಳೆ ಅನುಸಾರವಾಗಿ ಸೂಕ್ತ ಬೆಲೆಯನ್ನು ನಿಗಧಿ ಪಡಿಸಬೇಕು.
ಬಜೆಟ್ನಿಂದ ಮಾತ್ರ ವಲ್ಲದೆ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಕಛೇರಿಗಳಲ್ಲಿ ರೈತನ ಒಂದು ಅರ್ಜಿಯಿಂದ ಜಮೀನಿನ ಎಲ್ಲ ಕೆಲಸಗಳು ಅವನನ್ನು ಹುಡುಕುತ್ತಾ ಬರಬೇಕು ಹಾಗೆ ಲಂಚಮುಕ್ತ ಸರ್ಕಾರಿ ಕಛೇರಿಗಳಾದರೆ ಕಡಿಮೆ ಹಿಡುವಳಿ ರೈತರಿಂದ ಹಿಡಿದು ಎಲ್ಲಾ ರೈತರ ಅಭಿವೃದ್ದಿ ಸಾಧ್ಯ.
ಗಿರೀಶ್ ವಸಿಷ್ಟ ಬಿ,ಎಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ