ರತ್ನಾಕರನಿಂದ ವಾಲ್ಮೀಕಿಯವರೆಗೆ: ನಿಮ್ಮ ಪಾಪದಲ್ಲಿ ನಿಮ್ಮ ಕುಟುಂಬದ ಪಾಲು ಇದೆಯೇ..?!

ವಾಲ್ಮೀಕಿ ಮಹರ್ಷಿಗಳನ್ನು ನೆನೆಯಲು ಭಾರತದಲ್ಲಿ ಪ್ರತಿವರ್ಷ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ರಾಮಾಯಣ ಮಹಾಕಾವ್ಯದ ರಚನೆ ಮೂಲಕ ಮಹಾನ್ ಕವಿ ಮತ್ತು ಋಷಿಯಾಗಿ ಖ್ಯಾತಿ ಪಡೆದ ಮಹರ್ಷಿ ವಾಲ್ಮೀಕಿಯವರನ್ನು ಗೌರವಿಸುವ ಈ ಆಚರಣೆ ಮಹತ್ವದ್ದಾಗಿದೆ. ವಾಲ್ಮೀಕಿಯವರನ್ನು ‘ಆದಿಕವಿ’ ಎಂದೂ ಕರೆಯಲಾಗುತ್ತದೆ, ಏಕೆಂದರೆ ರಾಮಾಯಣವು ಪ್ರಪಂಚದ ಮೊದಲ ಮಹಾಕಾವ್ಯವೆಂದು ಪರಿಗಣಿಸಲಾಗಿದೆ. ರಾಮಾಯಣವನ್ನು ರಚಿಸುವ ಮೊದಲು, ಶ್ಲೋಕವಿಧಾನವನ್ನೂ ವಾಲ್ಮೀಕಿಯೇ ರೂಪಿಸಿದರೆಂದು ಹೇಳಲಾಗುತ್ತದೆ. ಈ ಶ್ಲೋಕವಿಧಾನವನ್ನು ಮಹಾಭಾರತ ಮತ್ತು ಪುರಾಣಗಳಂತಹ ಇತರ ಗ್ರಂಥಗಳಲ್ಲೂ ಬಳಸಲಾಗಿದೆ.
ಬಾಲ್ಯದಿಂದ ಬದಲಾವಣೆಯವರೆಗೆ:
ಪ್ರಚೇತಸ ಋಷಿಯ ಮಗನಾಗಿ ಜನಿಸಿದ ಬಾಲಕನಿಗೆ ರತ್ನಾಕರ ಎಂದು ಹೆಸರು ಇಡಲಾಗಿತ್ತು. ತನ್ನ ಬಾಲ್ಯದಲ್ಲಿ ವಾಲ್ಮೀಕಿ ಕಾಡಿನಲ್ಲಿ ಕಾಣೆಯಾಗಿ, ಎಳೆಯ ವಯಸ್ಸಿನಲ್ಲಿಯೇ ಒಂದು ಬೇಟೆಗಾರನ ಪ್ರೀತಿಗೆ ಪಾತ್ರನಾದ. ಈ ಬೇಟೆಗಾರನ ಮಾರ್ಗದರ್ಶನದಲ್ಲಿ, ವಾಲ್ಮೀಕಿಯು ಬೇಟೆಗಾರನಾಗಿ ಬೆಳೆದು ಬಂದನು. ಬಳಿಕ, ಬೇಟೆಗಾರರ ಕುಟುಂಬದ ಹುಡುಗಿಯನ್ನು ವಿವಾಹವಾಗಿ, ಬಹಳಷ್ಟು ಮಕ್ಕಳ ತಂದೆಯಾಗಿದ್ದನು. ಕುಟುಂಬದ ಜೀವನ ಸಾಗಿಸಲು ಕಷ್ಟ ಅನುಭವಿಸುತ್ತಿದ್ದಾಗ, ನಿರ್ಗತಿಕ ಸ್ಥಿತಿಯಲ್ಲಿ ರತ್ನಾಕರ ದರೋಡೆಗಾರನಾಗಿ ಜೀವನ ಸಾಗಿಸಲು ಪ್ರಾರಂಭಿಸುತ್ತಾನೆ.
ದಾರಿದೀಪವಾದ ನಾರದರು:
ಒಂದು ದಿನ ನಾರದ ಋಷಿ ರತ್ನಾಕರನ ಹತ್ತಿರ ಬಂದಾಗ, ದರೋಡೆ ಮಾಡುತ್ತಿದ್ದ ರತ್ನಾಕರನಿಗೆ ನಾರದರು ಹೊಸ ದಾರಿ ತೋರಿಸಿದರು. “ನೀನು ಮಾಡುತ್ತಿರುವ ಪಾಪವನ್ನು ನಿನ್ನ ಕುಟುಂಬ ಹಂಚಿಕೊಳ್ಳಲು ಸಿದ್ಧವಿದೆಯೇ?” ಎಂಬ ನಾರದ ಋಷಿಯ ಪ್ರಶ್ನೆಗೆ ರತ್ನಾಕರ ತನ್ನ ಕುಟುಂಬವನ್ನು ಕೇಳಿದಾಗ, ಯಾರೂ ಸಹ ಅವರ ಪಾಪವನ್ನು ಹಂಚಿಕೊಳ್ಳಲು ಸಿದ್ಧರಾಗಿರಲಿಲ್ಲ. ದುಃಖದಿಂದ, ಅವರು ನಾರದ ಋಷಿಯ ಹತ್ತಿರ ಮರಳಿದಾಗ, ನಾರದರು ರಾಮನನ್ನು ಜಪಿಸಲು ಅವರಿಗೆ ಮಾರ್ಗದರ್ಶನ ನೀಡಿದರು. ‘ರಾಮ’ ಎಂಬ ಹೆಸರನ್ನು ಉಚ್ಚರಿಸಲು ರತ್ನಾಕರಿಗೆ ಸಾಧ್ಯವಾಗದಾಗ, ನಾರದರು ‘ಮರ’ ಎಂದು ಜಪಿಸಲು ಹೇಳಿದರು.
ವರ್ಷಗಳು ಉರುಳಿದ ನಂತರ, ರತ್ನಾಕರನು ವಾಲ್ಮೀಕಿಯಾಗಿ ಪರಿವರ್ತಿತನಾದನು. ವಾಲ್ಮೀಕಿಯು ತಮ್ಮ ದೀರ್ಘಕಾಲದ ತಪಸ್ಸಿನ ನಂತರ, ಅಂತರಾಳದಿಂದ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ರಾಮನ ಕಥೆಯನ್ನು ಜಗತ್ತಿಗೆ ತಲುಪಿಸಿದವರು ವಾಲ್ಮೀಕಿ ಮಹರ್ಷಿಯೇ.
ವಾಲ್ಮೀಕಿಯ ಕಾವ್ಯಶಕ್ತಿ:
ವಾಲ್ಮೀಕಿಯ ಮೊದಲ ಶ್ಲೋಕವು ರಾಮಾಯಣದ ಕಥೆಯ ಭಾಗವಾಗಿರಲಿಲ್ಲ. ಬೇಟೆಗಾರನಿಗೆ ಕೊಟ್ಟ ಶಾಪವೇ ಮೊದಲ ಶ್ಲೋಕ. ಆ ಶಾಪವು ಸಾಹಿತ್ಯಕ ಶ್ರದ್ಧೆಯಲ್ಲಿ ಶ್ರೇಷ್ಠತೆಯನ್ನು ಹೊಂದಿತ್ತು. ಈ ಶ್ಲೋಕವು ಭೂತದೃಷ್ಠಿ ಮತ್ತು ಕಾವ್ಯದ ಬಾಹ್ಯ ರಚನೆಯ ಎರಡು ಆಯಾಮಗಳಲ್ಲಿ ಕೂಡ ಶ್ರೇಷ್ಠತೆಯನ್ನು ತಲುಪಿದೆ.
ನಮ್ಮ ಮೆಲುಕು:
ವಾಲ್ಮೀಕಿಯ ಜೀವನವು ಪರಿವರ್ತನೆಯ ಕಥೆಯಾಗಿದೆ. ಅವರು ತಂದೆಯಾಗಿ, ಬೇಟೆಗಾರನಾಗಿ ಜೀವನದ ಪಾಪದ ದಾರಿ ತುಳಿದು, ಋಷಿಯಾಗಿ ತಮ್ಮ ಬಾಳು ಪರಿವರ್ತನೆ ಮಾಡಿಕೊಂಡಿದ್ದು ಎಲ್ಲಾ ಮಾನವಜೀವಿಗಳಿಗೂ ಮಾದರಿಯಾಗಿದೆ. ತಮ್ಮ ಪಾಪಗಳಿಂದ ತಾವೇ ಮುಕ್ತಿ ಪಡೆದು, ತನ್ನನ್ನು ಪರಿಷ್ಕರಿಸಿಕೊಳ್ಳುವ ಶಕ್ತಿ ಇರುವ ಪ್ರತಿ ವ್ಯಕ್ತಿಯಲ್ಲೂ ಒಬ್ಬ ವಾಲ್ಮೀಕಿ ಇದ್ದೇ ಇರುತ್ತಾನೆ.
ವಾಲ್ಮೀಕಿಯ ಶ್ಲೋಕಗಳು ನಾಡಿಗೆ ರಾಮಾಯಣವನ್ನು ನೀಡಿದಂತೆಯೇ, ಆತ್ಮಪರಿವರ್ತನೆಗೆ ಮಾರ್ಗದರ್ಶಕವಾಗಿದೆ.