CinemaEntertainment

“ದರ್ಶನ್‌ಗಾಗಿ ಪೂಜೆ ಆಗಿದ್ದರೆ ನಾನು ಬರುತ್ತಿರಲಿಲ್ಲ” – ನಟ ಜಗ್ಗೇಶ್ ವಿವಾದಾತ್ಮಕ ಹೇಳಿಕೆ.

ಬೆಂಗಳೂರು: ಇಂದು ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆಯ ಕಾರ್ಯಕ್ರಮ ಜರುಗಿದ್ದು, ನವರಸನಾಯಕ ಜಗ್ಗೇಶ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮದ ವೇಳೆ, ದರ್ಶನ್‌ಗೋಸ್ಕರ ಪೂಜೆ ಮಾಡಿದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ ಎಂದು ಜಗ್ಗೇಶ್ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಪೂಜೆಯಲ್ಲಿ ಸರ್ಪ ಶಾಂತಿ, ಅಶ್ಲೇಷ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಜಗ್ಗೇಶ್ ಅವರು ದರ್ಶನ್ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಈ ಪೂಜೆ ದರ್ಶನ್‌ಗಾಗಿ ಅಲ್ಲ, ಅದು ಚಿತ್ರರಂಗದ ಏಳಿಗೆಗಾಗಿ. ಆದ್ದರಿಂದಲೇ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ” ಎಂದರು.

ನಾಗಾರಾಧನೆಯ ಸಂದರ್ಭದಲ್ಲಿ ನಾಗದೇವರು ನಮಗೆ ಒಗ್ಗಟ್ಟಾಗಿ ಕೆಲಸ ಮಾಡುವುದಕ್ಕೆ ಉತ್ತೇಜಿಸಿದ್ದಾರೆ ಎಂದು ಜಗ್ಗೇಶ್ ಅಭಿಪ್ರಾಯಪಟ್ಟರು. “ನಾವು ಆಧ್ಯಾತ್ಮಿಕವಾಗಿ ಇದ್ದೇವೆ. ದೇವರನ್ನು ನಂಬುವವರ ಬೆಳವಣಿಗೆ ಹೇಗಿದೆ ಮತ್ತು ನಂಬದಿರುವವರ ಬೆಳವಣಿಗೆ ಹೇಗಿದೆ ನೋಡಿ..” ಎಂದು ಅವರು ಹೇಳಿದರು.

Show More

Related Articles

Leave a Reply

Your email address will not be published. Required fields are marked *

Back to top button