Alma Corner

   ಭೂಷಣ ಗವಾಯಿ ಮುಂದಿನ  CJI, ನ್ಯಾಯಾಂಗದಲ್ಲಿ ಹೊಸ ಅಧ್ಯಾಯ

  • ಭೂಷಣ ರಾಮಕೃಷ್ಣ ಗವಾಯಿ) ಅವರ ಹೆಸರನ್ನು ಹಾಲಿ ಸಿಜೆಐ ಸಂಜೀವ್‌ ಖನ್ನಾ ಶಿಫಾರಸು ಮಾಡಿದ್ದಾರೆ. ಮೇ 14 ರಂದು ಅವರು  ಸಿಜೆಐ ಆಗಿ ಪ್ರಮಾಣ ಸ್ವೀಕರಿಸುವ ಸಾಧ್ಯತೆ ಇದೆ.

                      ಭಾರತದ ಸುಪ್ರಿಂ ಕೋರ್ಟ್‌ನ ಮುಂದಿನ  ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್‌.ಗವಾಯಿ( ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್‌ ಖನ್ನಾ ನಿವೃತ್ತಿತ ನಂತರ ,

ಸುಪ್ರಿಂ ಕೋರ್ಟ್‌ನ   ಹಿರಿಯ ನ್ಯಾಯಮೂರ್ತಿ  ಬಿ.ಆರ್‌.ಗವಾಯಿ ಅವರು  ಭಾರತದ 52ನೇ ಸಿಜೆಐ ಆಗಿ ಪ್ರಮಾಣ ವಚನ  ಸ್ವೀಕರಿಸಲಿದ್ದಾರೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇವರಿಗೆ  ಪ್ರಮಾಣ ವಚನ ಬೋಧಿಸಲಿದ್ದಾರೆ.ನ್ಯಾಯಮೂರ್ತಿ  ಬಿ.ಆರ್‌.ಗವಾಯಿ ಅವರು ನವೆಂಬರ್‌ 2025 ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.  ನ್ಯಾಯಾಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು 65 ವರ್ಷ ವಯಸ್ಸಾದ ಬಳಿಕ ನಿವೃತ್ತಿರಾದ ಹಿನ್ನಲೆಯಲ್ಲಿ ,ಅವರ ಸ್ಧಾನಕ್ಕೆ   ಅಂದರೆ 2024 ರಲ್ಲಿ  ನ್ಯಾಯಾಮೂರ್ತಿ ಖನ್ನಾ ಅವರು ನೇಮಕಗೊಂಡಿದ್ದರು. ಇದೀಗ 6 ತಿಂಗಳ ಬಳಿಕ ಅವರೂ  ಕೂಡ ನಿವೃತ್ತಿಯಾಗಲಿದ್ದಾರೆ.

                                                                ನ್ಯಾ.ಬಿ.ಆರ್.ಗವಾಯಿ ಅವರು  24 ನವೆಂಬರ್‌ 1960 ರಂದು ಅಮರಾವತಿಯಲ್ಲಿ ಜನಿಸಿದರು.  ಇವರು 1985 ರಲ್ಲಿ ವಕೀಲರಾಗಿ ತಮ್ಮ ಕಾನೂನು ಸೇವೆಯನ್ನು ಆರಂಭಿಸಿದರು. 1987ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ಶುರುಮಾಡಿದರು. ನವೆಂಬರ್‌ 12, 2005 ರಂದು ಇವರನ್ನು ಹೈಕೋರ್ಟ್ ನ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. ಅಂದಿನಿಂದ ಸುಪ್ರಿಂ ಹೈಕೋರ್ಟ್ ನ ಹಲವಾರು ಸಾಂವಿಧಾನಿಕ ಪೀಠಗಳ ಭಾಗಗಳಾಗಿ  ಹಲವು ಮಹತ್ವದ ತೀರ್ಪುಗಳನ್ನು  ಇವರು  ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಧಾನಮಾನ ನೀಡಿದ್ದ ಆರ್ಟಿಕಲ್‌ 370 ಅನ್ನು ರದ್ದುಗೊಳಿಸುವ  ಕೇಂದ್ರದ ನಿರ್ಧಾರವನ್ನು 2019 ರ ಸರ್ವಾನುಮತದಿಂದ ಎತ್ತಿಹಿಡಿದ ಐವರು ನ್ಯಾಯಾಶಧೀಶರ ಪೀಠದಲ್ಲಿ ಇವರೂ ಇದ್ದರು. ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆ  ನೀಡಲು  ಚುನಾವಣೆ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿದ್ದ ಐವರ ನ್ಯಾಯಮೂರ್ತಿಗಳ ಪೀಠದಲ್ಲಿಯೂ ನ್ಯಾ.ಗವಾಯಿ ಅವರಿದ್ದರು.  2,000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ 2016ರಲ್ಲಿ  ನೋಟು ಅಮಾನ್ಯೀಕರಣ ತೀರ್ಮಾನವನ್ನು  ಎತ್ತಿಹಿಡಿದ ಸುಪ್ರಿಂ ಕೋರ್ಟ್‌ನ ಪೀಠದ ಭಾಗವೂ ಆಗಿದ್ದರು. ಮತ್ತೊಂದು ಪ್ರಮುಖ ತೀರ್ಪಿನಲ್ಲಿ, ಪರಿಶಿಷ್ಟ ಜಾತಿಗಳಲ್ಲಿ ಉಪವರ್ಗೀಕರಣಗಳನ್ನು ರಚಿಸಲು ರಾಜ್ಯಗಳಿಗೆ ಸಾಂವಿಧಾನಿಕ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌  ಆದೇಶ ನೀಡಿತ್ತು. ಅದರಲ್ಲಿ ಏಳು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನಿಕ ಪೀಠದಲ್ಲಿ ನ್ಯಾ. ಬಿಆರ್‌ ಗವಾಯಿ ಅವರೂ ಒಬ್ಬರಾಗಿದ್ದರು.  ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ ನ್ಯಾಯಪೀಠದಲ್ಲಿದ್ದರು.

   ಇಂಥ ಪ್ರಮುಖ ಆದೇಶಗಳ ಭಾಗವಾಗಿದ್ದ ನ್ಯಾ. ಬಿಆರ್‌ ಗವಾಯಿ ಅವರು ಇದೀಗ ದೇಶದ ನ್ಯಾಯಾಂಗದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ. 2025ರ ನವೆಂಬರ್‌ವರೆಗೆ ಅವರು ಈ ಸ್ಥಾನದಲ್ಲಿ ಇರಲಿದ್ದಾರೆ.  ನ್ಯಾಯಮೂರ್ತಿಗವಾಯಿ ಅವರು ತಮ್ಮ ನ್ಯಾಯಾಂಗ ಸೇವೆಯಲ್ಲಿ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳರಕ್ಷಣೆಗೆ ಬದ್ದರಾಗಿದ್ದರಾ. ಅವರು ತಮ್ಮ ಅವಧಿಯಲ್ಲಿ  ನ್ಯಾಯಾಂಗ ವ್ಯವಸ್ಧೆಯನ್ನು ಮತ್ತಷ್ಟು ಬಲಪಡಿಸಲು ತಮ್ಮ ಕೊಡುಗೆ  ನೀಡುವ ನಿರೀಕ್ಷೆಯಿದೆ.

ಸಂಗೀತ ಎಸ್‌

ಆಲ್ಮಾ ನ್ಯೂಸ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button