ಜಾತಿ ಮೇಲ್ವಿಚಾರಣೆಗೆ ವಿರೋಧವಾಗಿ: ಫುಲೆ ಅವರ ಧೈರ್ಯದ ಚಳವಳಿ


- ಜ್ಯೋತಿ ರಾವ್ಬಾ ಪುಲೆ ಅವರು ಭಾರತ ದ ಪ್ರಮುಖ ಸಾಮಾಜಿಕ ಸುಧಾರಕರು ಮತ್ತು ಶಿಕ್ಷಣ ತತ್ವಜ್ಞರಾಗಿದ್ದರು.
ಜ್ಯೋತಿರಾವ್ಬಾ ಫುಲೆ ಅವರು ಏ.11, 1827 ರಂದು ಮಹಾರಾಷ್ಟ್ರದ ಪುಣೆ ನಗರದಲ್ಲಿ ಜನಿಸಿದರು. ಅವರು ಹೂಗಾರ ವ್ಯಾಪಾರಕ್ಕೆ ಸೇರಿದವರು.ತಾಯಿ ಚಿಮಣಾಬಾಯಿ ತಂದೆ ಗೋವಿಂದರಾವ್ ಅವರು ಪುಣೆಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದರು. ಜ್ಯೋತಿರಾವ್ಬಾ ಜನಿಸಿದ ಕೆಲವೇ ತಿಂಗಳಲ್ಲಿ ತಾಯಿ ಚಿಮಣಾಬಾಯಿ ಕೊನೆಯುಸಿರೆಳೆದರು. ನಂತರ ಇವರ ಲಾಲನೆ ಪಾಲನೆಯನ್ನು ಚಿನಣಾವಾಯಿ ಸೋದರಿ ಸುಗುಣಾಬಾಯಿ ನೋಡಿಕೊಂಡರು ಬಡತನದ ಮಧ್ಯೆಯು ತಮ್ಮ ಬುದ್ಧಿವಂತಿಕೆಯಿಂದ ವಿದ್ಯಾಭ್ಯಾಸವನ್ನು ಮಾಡಿದರು. 1847 ರಲ್ಲಿಸ್ಕಾಟಿನ್ ಮಿಶನ್ ಸ್ಕೂಲ್ ಗೆ ಸೇರಿದರು. ಮುಂದೆ ಅಲ್ಲಿ ಅಧ್ಯಾಪಕರಾದರು. ನಿರಂತರ ಓದುವ ಹವ್ಯಾಸ ಉಳ್ಳ ಅವರು ಶಿವಾಜಿ ಮತ್ತು ಜಾರ್ಜ್ ವಾಶಿಂಗ್ ಟನ್ ಜೀವನ ಚರಿತ್ರೆ ಓದಿ ಪ್ರಭಾವಿತರಾದರು. ಶಿವಾಜಿ ಬಗ್ಗೆ ಪುಸ್ತಕ ಬರೆದರು.

13ನೇ ವಯಸ್ಸಿನಲ್ಲಿದ್ದಾಗ ಇವರಿಗೆ ಬಾಲ್ಯ ವಿವಾಹ ಮಾಡಲಾಯಿತು. ಸತಾರ ಜಿಲ್ಲೆ ನಾಯಗಾಂವ್ ನಿವಾಸಿ ಶ್ರೀ ನೇವಸೆ ಪಾಟೀಲರ ಮಗಳು ಸಾವಿತ್ರಿಬಾಯಿಯೊಂದಿಗೆ ಜ್ಯೋತಿರಾವ್ಬಾ ಅವರ ವಿವಾಹವಾದರು. ಇಂಗ್ಲಿಷ್ ಶಿಕ್ಷಣ ವಿದ್ಯಾಭ್ಯಾಸ ಅವರ ಜೀವನದ ಮಹತ್ವಘಟ್ಟವಾಗಿತ್ತು. ಜ್ಯೋತಿಬಾ ಅವರು ತಮ್ಮ ಪತ್ನಿ ಸಾವಿತ್ರಿಬಾಯಯಿ ಅವರಿಗೆ ತಾವೇ ಶಿಕ್ಷಣ ಕೊಟ್ಟು ವಿದ್ಯಾವಂತರನ್ನಾಗಿ ಮಾಡುತ್ತಾರೆ. ಸಾವಿತ್ರಿಬಾಯಿ ಪುಲೆ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊರಹೊಮ್ಮಿದರು.
ಬ್ರಾಹ್ಮಣ ಮಿತ್ರರ ಮದುವೆಯ ಮೆರವಣಿಗೆಯಲ್ಲಿ ಪಾಲ್ಗೊಂಡು ಬಗ್ಗೆ ಕೆಲವು ಬ್ರಾಹ್ಮಣರು ಅವರನ್ನು ಬೈದುಅವಮಾನಗೊಳಿಸಿದರು. ಜ್ಯೋತಿರಾವ್ಬಾ ಸಹಜವಾಗಿ ಬ್ರಾಹ್ಮಣರ ವಿರೋಧಿಯಾದರು. ಸಮಾಜದಲ್ಲಿನ ದೋಷಗಳೆಲ್ಲ ಬ್ರಾಹ್ಮಣರ ಅಟ್ಟಹಾಸವೇ ಕಾರಣವೆಂದು ಅವರು ನಂಬಿದ್ದರು. ಗುಲಾಮಗಿರಿಯ ಬಗ್ಗೆ ಅವರು ಬರೆದ ಒಂದು ಪುಸ್ತಕದಲ್ಲಿ ಇಡೀ ಹಿಂದೂ ಸಮಾಜವನ್ನು ಬ್ರಾಹ್ಮಣರು ಬಂಧಿಸಿದ್ದಾರೆ ಎಂದು ಬಲವಾಗಿ ಪ್ರತಿಪಾದಿಸಿದರು. ಜಾತಿಗಳ ಮೇಲು-ಕೀಳು, ಭಾವನೆ ಶೂದ್ರ ಅತಿ ಶೂದ್ರರ ದೀನ ಸ್ಥಿತಿಗೆ ಕಾರಣವಾದ ಸಾಮಾಜಿಕ ಚೌಕಟ್ಟನ್ನು ತೀವ್ರ ಬದಲಾಯಿಸಲು ಅವರು ನಿರ್ಧರಿಸಿ ಅವರು 1873 ರಲ್ಲಿ ಸತ್ಯಶೋಧಕ ಸಮಾಜ ಸ್ಥಾಪಿಸಿದರು. ಕೆಳಜಾ ತಿ ಮಹಿಳೆಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1851 ರಲ್ಲಿ ಮಹಿಳೆಯರಿಗೆ ಒಂದು ಶಾಲೆಯನ್ನು ಆರಂಭಿಸಿದರು. ಆ ಶಾಲೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಅಧ್ಯಾಪಕಿಯಾಗಿ ಮಾಡಿದರು.ರೈತರಿಗೂ ಮಹಿಳೆಯರಿಗೂ ತಮ್ಮ ಮನೆಯಲ್ಲೇ ರಾತ್ರಿ ಶಾಲೆ ತೆರೆದರು.
ಜ್ಯೋತಿರಾವ್ಬಾ ಫುಲೆ ಅವರು ಜೀವನದ ಕೊನೆಯ ದಿನಗಳಲ್ಲಿಯೂ, ಬಡಜನರ ಸೇವೆಯಲ್ಲಿಯೇ ತೊಡಗಿದ್ದರು. ಅವರು ನವಂಬರ್ 28,1890 ರಂದು ನಿಧನರಾದರು. ಅವರ ಜೀವನವು ಭಾರತೀಯರ ಸಮಾಜ ಸುಧಾರಣೆಗೆ ಬೃಹತ್ ಆದರ್ಶವಾಯಿತು. ಅವರನ್ನುʼʼ ಮಹಾತ್ಮʼʼ ಎಂಬ ಬಿರುದಿನಿಂದ ಗೌರವಿಸಲಾಯಿತು

ಸಮಾಜ ಸುಧಾರಣಾ ಅವರ ಕೊಡುಗೆಗಳು:
- ಮಹಿಳಾ ಮತ್ತು ದಲಿತ ಶಿಕ್ಷಣ: ಅವರು ತಮ್ಮ ಪತ್ನಿ ಸಾವಿತ್ರಿಬಾಯಿ ಅವರನ್ನು ಅಕ್ಷರ ಕಲಿಸಿದರು. ಮತ್ತು 1848 ರಲ್ಲಿ ಮಹಿಳೆಯರಿಗೆ ಪ್ರಥಮ ಶಾಲೆಯನ್ನು ಸ್ಥಾಪಿಸಿದರು .ಇದು ಭಾರತದ ಮೊದಲ ಮಹಿಳಾ ಶಾಲೆಯಾಗಿದೆ.
- ಸತ್ಯಶೋಧಕ ಸಮಾಜ: ಜಾತಿ ವ್ಯವಸ್ಥೆಯ ವಿರುದ್ಧವಾಗಿ ಮತ್ತು ಶೂದ್ರ ಅತಿ ಶೂದ್ರ ಹಕ್ಕುಗಳಿಗಾಗಿ ಈ ಸಂಘವನ್ನು ಸ್ಥಾಪಿಸಿದರು.
3. ವಿಧಿವೆಯರ ಮರು ವಿವಾಹ: ಪುಲೆ ಅವರು ವಿಧವೆಯರ ಮದುವೆಯನ್ನು ಬೆಂಬಲಿಸಿದರು. ಮತ್ತು ಈ ಪರಂಪರೆಗಳನ್ನು ಮುರಿಯಲು ಬಹುಮಟ್ಟಿಗೆ ಯಶಸ್ವಿಯಾದರು.
4. ಜಾತಿ ವಿರುದ್ಧದ ಹೋರಾಟ: ಬ್ರಾಹ್ಮಣೀಯರ ದಬ್ಬಾಳಿಕೆ ವಿರುದ್ಧವಾಗಿ ಅವರು ಧ್ವನಿ ಎತ್ತಿದರು. ಅವರು ಗುಲಾಮಗಿರಿ ಎಂಬ ಕೃತಿಯನ್ನು ಬರೆದು ಶೋಷಿತರ ಸ್ವಾತಂತ್ರಕ್ಕಾಗಿ ಹೋರಾಡಿದರು.
ಜ್ಯೋತಿರಾವ್ಬಾಫುಲೆ ಅವರ ಕೊಡುಗೆಗಳನ್ನು ಸ್ಮರಿಸಲು, ಅವರ ಜನ್ಮದಿನವನ್ನು ಏ.11 ರಂದು ಆಚರಿಸಲಾಗಿದೆ. ವಿಭಿನ್ನ ಸ್ಧಳಗಳಲ್ಲಿ ಅವರ ಪ್ರತಿಮೆಗಳನ್ನು ಸ್ಧಾಪಿಸಿ, ಅವರಿಗೆ ಗೌರವ ಅರ್ಪಿಸಲಾಗುತ್ತದೆ. ನಿಷ್ಠೆ ಶೌರ್ಯ ಮತ್ತು ಸಮಾಜದ ಬದಲಾವಣೆಗೆ ಮಾಡಿದ ಕೊಡುಗೆಗಳಿಂದ ಜ್ಯೋತಿರಾವ್ ಫುಲೆ ಅವರನ್ನು ಇಂದಿಗೂ ಸ್ಮರಿಸಲಾಗಿದೆ.
ಸಂಗೀತ
ಆಲ್ಮಾ ನ್ಯೂಸ್ ವಿದ್ಯಾರ್ಥಿ