Bengaluru

ಬಿಬಿಎಂಪಿಯಲ್ಲಿ “ನಂಬಿಕೆ ನಕ್ಷೆ” ಯೋಜನೆ: ಬೆಂಗಳೂರು ನಾಗರಿಕರಿಗೆ ಸುಗಮ ಅನುಮೋದನೆ ಪ್ರಕ್ರಿಯೆ!

ಬೆಂಗಳೂರು: ನಗರದಲ್ಲಿ ಮನೆ ನಿರ್ಮಾಣ ಮತ್ತು ನವೀಕರಣದ ಅನುಮೋದನೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು “ನಂಬಿಕೆ ನಕ್ಷೆ” ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ.

ಯೋಜನೆಯ ವಿವರಣೆ: ಈ ಯೋಜನೆ ಪ್ರಕಾರ, 50/80 ವಿಸ್ತೀರ್ಣದ ವರೆಗೆ ಇರುವ ನಿವೇಶನಗಳ ಮಾಲೀಕರು, ಅನುಮೋದಿತ ಎಂಜಿನಿಯರ್ ಅಥವಾ ಕಟ್ಟಡ ವಿನ್ಯಾಸಕಾರರಿಂದ ನಕ್ಷೆಯನ್ನು ಅನುಮೋದನೆ ಪಡೆದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಟ್ಟಡದ ಅನುಮೋದನೆ ಪಡೆಯಬಹುದಾಗಿದೆ. ಇದರಿಂದ ಬಿಬಿಎಂಪಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ, ಈ ಯೋಜನೆ ಮೂಲಕ ಅನುಮತಿ ಪ್ರಕ್ರಿಯೆ ವೇಗವಾಗಿ ಮುಗಿಯಲಿದೆ. ಪ್ರಸ್ತುತ, ಯೋಜನೆಯನ್ನು ನಗರದ ಎಲ್ಲಾ ವಲಯಗಳಲ್ಲಿ ವಿಸ್ತರಿಸಲಾಗಿದೆ.

ರಸ್ತೆ ಗುಂಡಿ ಮತ್ತು ಸುಧಾರಣಾ ಕಾರ್ಯ: ಬೆಂಗಳೂರು ನಗರದಲ್ಲಿ 2,795 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ, ಮತ್ತು ಮುಂದಿನ 15 ದಿನಗಳಲ್ಲಿ ಇವುಗಳನ್ನು ಮುಚ್ಚಲು ಸೂಚಿಸಲಾಗಿದೆ. ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡಲು ರೂ. 660 ಕೋಟಿ ವೆಚ್ಚವನ್ನು ಮೀಸಲಿಡಲಾಗಿದೆ.

ರಾಜಕಾಲುವೆ ಯೋಜನೆ ಮತ್ತು ಪರಿಹಾರ: 300 ಕಿ.ಮೀ. ರಾಜಕಾಲುವೆಯ ಸುತ್ತ 30 ಅಡಿ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ 100 ಕಿ.ಮೀ. ಪ್ರಥಮ ಹಂತದಲ್ಲಿ ರೂ. 200 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ರಾಜಕಾಲುವೆಯ 50 ಮೀ. ಸುತ್ತಕ್ಕೆ ಯಾವುದೇ ನಿರ್ಮಾಣ ಕಾರ್ಯಕ್ಕೆ ನಿರ್ಬಂಧವಿದ್ದು, ನಿಯಮಗಳ ಪ್ರಕಾರ ನಿರ್ವಹಣೆ ಮಾಡಲಾಗುವುದು.

ಸ್ವಚ್ಚತಾ ಅಭಿಯಾನ ಮತ್ತು ಗಾಂಧಿ ಜಯಂತಿ: ಮಹಾತ್ಮಾ ಗಾಂಧಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 100 ವರ್ಷಗಳ ಪೂರೈಕೆ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳು ಆನ್‌ಲೈನ್ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ, ಮತ್ತು ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button