Alma Corner

ರಾಜ್ಯದ ಜನತೆಗೆ ಸದ್ಯದಲ್ಲೇ ಹಾಲಿನ ದರ ಏರಿಕೆ ಶಾಕ್?‌

ndini milk price hike

   ಒಂದು ಕಡೆ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಜನರು ಬದುಕುವುದು ಹೇಗೆ? ʼʼಈಗಾಗಲೇ ಸಾರಿಗೆ ಬಸ್ ದರ, ವಿದ್ಯುತ್, ಮೆಟ್ರೋ ಪ್ರಯಾಣ ದರಗಳು ಏರಿಕೆಯಾಗಿದ್ದು, ಹಾಲಿನ ದರ ಏರಿಕೆಯೂ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.‌ʼʼ

ಒಂದುವೇಳೆ ಹಾಲಿನ ದರ ಹೆಚ್ಚದರೆ ಎಷ್ಟಾಗಬಹುದು, ಹಾಲಿನ ಹೆಚ್ಚಳಕ್ಕೆ ಕಾರಣ ಏನು?

ನಂದಿನಿ ಹಾಲಿನ ದರ ಏರಿಸುವುದಕ್ಕೆ ಕೆಎಂಎಫ್ ಸಜ್ಜಾಗಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲಿ 2 ನೇ ಸ್ಧಾನದಲ್ಲಿದೆ. ಗುಜರಾತ್‌ನ ಅಮೂಲ್‌ ನಂತರದ ಸ್ಥಾನ ಕೆಎಂಎಫ್‌ನದು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ. ಕೆಲವೇ ವರ್ಷಗಳ ಹಿಂದೆ ಹಾಲಿನ ಉತ್ಪಾದನೆ ಪ್ರಮಾಣ ಏಕಾಏಕಿ ಏರಿಕೆಯಾದರಿಂದ ದೊಡ್ಡ ಸಮಸ್ಯೆ ಆಗಿತ್ತು.  2017 ರಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿತ್ತು. ಅಂದರೆ ಸುಮಾರು ಎರಡೂವರೆ ವರ್ಷಗಳಿಂದ ಹಾಲು ಮಾರಾಟದ ದರವನ್ನು ಏರಿಕೆ ಮಾಡಿಲ್ಲ.

ಆದೇರೀತಿ ಈ ವರ್ಷವು ಕೂಡ ನಂದಿನಿ ಹಾಲಿನ ದರವನ್ನು  ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ  ಕೆಎಂಎಫ್‌  ಸಜ್ಜಾಗಿದೆ. ಕರ್ನಾಟಕ ಬಜೆಟ್‌ ಬಳಿಕ  ಮುಖ್ಯಮಂತ್ರಿಗಳು ಹಾಲಿನ  ಬೆಲೆ ಹೆಚ್ಚಳ ಮಾಡುವ ಸಾದ್ಯತೆ ಇದೆ.  ದಿನನಿತ್ಯ ಹಾಲು ಖರಿದಿಸುವ  ಗ್ರಾಹಕರಿಗೂ ಹೊರೆಯಾಗದಂತೆ ಹಾಗೂ  ಹಾಲು ಒಕ್ಕೂಟಗಳಿಗೂ ಆರ್ಥಿಕವಾಗಿ ಸಮ್ಯಸೆಯಾಗದಂತೆ ದರ ಏರಿಕೆ ಮಾಡಲು ಸಿಎಂ ಸಿದ್ದದರಾಮಯ್ಯ ತಿರ್ಮಾನ ಕೈಗೊಳ್ಳಲಿದ್ದಾರೆ. ಹಾಲಿನ ದರವನ್ನು ಲೀಟರ್‌ ಗೆ 3 ರೂಪಾಯಿ  ಹೆಚ್ಚಳ ಮಾಡುವ ಸಾಧ್ಯತೆಯಿದೆ  ಎಂದು ಹೇಳಲಾಗಿದೆ. ಆದರೆ ಹಾಲು ಒಕ್ಕೂಟಗಳು ಲೀಟರ್‌ ಗೆ 5 ರೂ. ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಯವರನ್ನು ಮನವಿ  ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯವರು 3 ರೂ. ದರ ಹೆಚ್ಚಳಕ್ಕೆ ಒಪ್ಪಿದರೆ, ದರ ಹೆಚ್ಚಳದ ಸಂಪೂರ್ಣ ಮೊತ್ತವನ್ನು ರೈತರಿಗೆ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ಒಕ್ಕೂಟಗಳು ಒಪ್ಪದೆ ಕನಿಷ್ಟ 60 ಪೈಸೆಯಾದರೂ ಮಂಡಳಿಗೆ ನೀಡಬೇಕು ಎಂದು  ಒತ್ತಾಯಿಸಿತ್ತಾರೆ.  ಮುಖ್ಯಮಂತ್ರಿಯವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕ ಮಹಾಮಂಡಳಿ( ಕೆಎಂಎಫ್)‌ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಧಾಪಕ ನಿರ್ದೇಶಕರ ಸಭೆಯಲ್ಲಿ ದರ ಏರಿಕೆ ಬಗ್ಗೆ ಚೆರ್ಚೆ ನಡೆದಿದೆ. ಸಭೆಯ ಅಧ್ಯಕ್ಷತೆಯನ್ನು  ವಹಿಸಿತ ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು , ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭವನ್ನು ರೈತರಿಗೆ  ನೀಡಬೇಕು ಎಂಬುವುದನ್ನು ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ಖರೀದಿಸಿದ ಸಂಪೂರ್ಣ ಹಾಲನ್ನು ಮಾರಾಟ ಮಾಡುವುದಿಲ್ಲ .ಬೇಡಿಕೆಗೆ ತಕ್ಕಂತೆ ಹಾಲು ಮಾರುಕಟ್ಟೆಗೆ ಸರಬರಾಜು ಮಾಡುತ್ತೇವೆ. ಬಾಕಿ ಉಳಿದ ಲಕ್ಷಾಂತರ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸುತ್ತೇವೆ. ಇದರಿಂದ ಒಕ್ಕೂಟಗಳಿಗೆ ತಿಂಗಳಿಗೆ ಕೋಟ್ಯಾಂತರ‌ ರು. ನಷ್ಟವಾಗುತ್ತದೆ ಎಂದು ತಮ್ಮ  ಅಳಲು  ತೋಡಿಕೊಂಡಿದ್ದಾರೆ. ಜೊತೆಗೆ ಪ್ರತಿ ಲೀಟರ್ ಹಾಲಿನ ಹೆಚ್ಚಳವಾದ ದರದಲ್ಲಿ ಶೇಕಡ 25 ರಷ್ಟು ಹಣ ಒಕ್ಕೂಟಗಳ ನಿರ್ವಹಣೆಗೆ ಬೇಕಾಗುತ್ತದೆ ,ಸಂಪೂರ್ಣ ಹಣವನ್ನು ರೈತರಿಗೆ ಕೊಡುವುದರಿಂದ ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಒಕ್ಕೂಟಗಳ ನಿರ್ದೇಶಕರು ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ.

ಹಾಲಿನ ದರದ ಹೆಚ್ಚಳದ ಸಂಪೂರ್ಣ ಹಣವನ್ನು ರೈತರಿಗೆ ವರ್ಗಾಯಿಸಲು ಒಪ್ಪದ ಒಕ್ಕೂಟಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಅಲ್ಲಿಯವರೆಗೂ ಹಾಲಿನ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಿದ್ದಾರೆ.

 ಆದರೆ ಇದೇ ವೇಳೆಯಲ್ಲಿ ಹಾಲು ಒಕ್ಕೂಟಗಳ ಖರ್ಚು ವೆಚ್ಚ ಕಡಿಮೆ ಮಾಡಬೇಕು ಪಾರದರ್ಶಕತೆ ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿ ವೆಚ್ಚ ಜಾಸ್ತಿಯಾಗುತ್ತದೆ ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ. ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ ಶೇಕಡ 2.ಕ್ಕಿಂತ ಹೆಚ್ಚಾಗಬಾರದು ಮುಂದಿನ ಆರು ತಿಂಗಳ ಒಳಗಾಗಿ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚವನ್ನು ಎರಡಕ್ಕಿಂತ ಕೆಳಗೆ ಇಳಿಸಬೇಕು ಎಂದು ಸೂಚಿಸಿದರು.

ಈಗಾಗಲೇ ರಾಜ್ಯದಲ್ಲಿ ಎಲ್ಲಾ ವರ್ಗದಲ್ಲೂ ದರ ಏರಿಕೆಯಾಗಿದ್ದು. ಈಗ ಸರ್ಕಾರ ಮತ್ತು ಹಾಲು ಒಕ್ಕೂಟದ ನಡುವೆ ಹಾಲಿನ ದರ ಏರಿಕೆ ವಾರ್ ನಡಿತಾ ಇದೆ. ರಾಜ್ಯ ಸರ್ಕಾರ ಏನಾದರೂ ಒಕ್ಕೂಟದ  ಪ್ರಸ್ತಾವನೆಯಂತೆ ಹಾಲಿನ ದರ ಏರಿಕೆ ಮಾಡಿದ್ದೆ ಅದಲ್ಲಿ ಜನರಿಗೆ ಗಾಯದ ಮೇಲೆ ಬರೆ ಬೀಳೋದಂತು ಸುಳ್ಳಲ್ಲ.‌

ಸಂಗೀತ .ಎಸ್

ಆಲ್ಮಾ ನ್ಯೂಸ್‌ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button