ವಾರಾಣಾಸಿಯಲ್ಲಿ 3,880 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಸುಮಾರು 3,880 ಕೋಟಿ ಮೌಲ್ಯದ ಅನೇಕ ಅಭಿವೃದ್ಧಿ ಯೋಜನಗಳಿಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿವೆ.

ಇಂದು ಇವರು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಮೆಹದಿಗಂಜ್ಗೆ ಸಾರ್ವಜನಿಕ ಸಭೆಗಾಗಿ ತೆರಳಲಿದ್ದಾರೆ. ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಮತ್ತು 3,880 ಕೋಟಿ ರೂ.ಗಳ 44 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಾರಣಾಸಿಯ ಬಿಜೆಪಿ ಅಧ್ಯಕ್ಷ ದಿಲೀಪ್ ಪಟೇಲ್ ತಿಳಿಸಿದ್ದಾರೆ. ಇದು ವಾರಣಾಸಿಗೆ ಮೋದಿ ಅವರ 50ನೇ ಭೇಟಿಯಾಗಿದೆ.

ಇದರೊದಿಗೆ ಮೋದಿ ಅವರು, 130 ಕುಡಿಯುವ ನೀರಿನ ಯೋಜನೆಗಳು, 100 ಹೊಸ ಅಂಗನವಾಡಿ ಕೇಂದ್ರಗಳು, 356 ಗ್ರಂಥಾಲಯಗಳು, 4 ಗ್ರಾಮೀಣ ರಸ್ತೆಗಳು ಮತ್ತು 2 ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ . ಅಲ್ಲದೇ ನಗರದ ವಿದ್ಯುತ್ ಮೂಲಸೌಕರ್ಯ (Electrical Infrastructure) ಬಲಪಡಿಸುವ ನಿಟ್ಟಿನಲ್ಲಿ 15 ಹೊಸ ಸಬ್ಸ್ಟೇಷನ್ಗಳ ನಿರ್ಮಾಣ, ಹೊಸ ಟ್ರಾನ್ಸ್ಫಾರ್ಮರ್ಗಳ ಸ್ಥಾಪನೆ ಮತ್ತು 1,500 ಕಿಮೀ ಹೊಸ ವಿದ್ಯುತ್ ತಂತಿ, ಕಂಬಗಳ, ಮಾರ್ಗದ ಸ್ಥಾಪನೆ ಸೇರಿದಂತೆ, 2,250 ಕೋಟಿ ರೂ. ವೆಚ್ಚದ 25 ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಮತ್ತು ಮೂರು ಹೊಸ ಮೇಲ್ಸೇತುವೆಗಳು, ವಿವಿಧ ರಸ್ತೆ ಅಗಲೀಕರಣ ಕ್ರಮಗಳು, ಶಾಲಾ ನವೀಕರಣ ಕಾರ್ಯಗಳು ಹಾಗೂ ಶಿವಪುರ ಮತ್ತು ಉತ್ತರ ಪ್ರದೇಶದ ಕಾಲೇಜಿನಲ್ಲಿ ಎರಡು ಕ್ರೀಡಾಂಗಣಗಳ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಂದ ಸುಮಾರು 4,000 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಮತ್ತು ಭದ್ರತಾ ವಿಭಾಗದ ಎಡಿಜಿ ರಘುವೀರ್ ಲಾಲ್ ಅವರು ತಿಳಿಸಿದ್ದಾರೆ.
ಮುಖ್ಯ ಯೋಜನೆಗಳು ಹೀಗಿವೆ
- ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ –ನ್ಯೂ ಭಾಪುರ್ ವಿಶೇಷ ಸರಕು ಸಾಗಣೆ ಕಾರಿಡಾರ್ : 10,900 ಕೊಟಿ ವೆಚ್ಚದಲ್ಲಿ ನಿರ್ಮಿತ ಈ ಕಾರಿಡಾರ್ ವಾರಣಾಸಿಯನ್ನು ದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳೊಂದಿಗೆ ಸಂಪರ್ಕಿಸುತ್ತದೆ.
- ವಾರಣಾಸಿ- ದೆಹಲಿ ಮಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮತ್ತು ದೋಹ್ರಿಘಾಟ್ – ಮವು ಮೆಮು ರೈಲು: ಈ ರೈಲು ಸೇವೆಗಳು ಪ್ರಯಾಣಿಕರ ಅನುಕೂಲತೆಗಾಗಿ ಆರಂಭಗೊಂಡಿದೆ.
- ಶಿವಪುರ –ಪುಲ್ವಾರಿಯಾ –ಲಹರ್ತಾರಾ ಹಸಿರು ಕ್ಷೇತ್ರ ರಸ್ತೆ: 370 ಕೋಟಿ ವೆಚ್ಚದದಲ್ಲಿ ನಿರ್ಮಿತ ಈ ರಸ್ತೆ ವಾರಣಾಸಿಯ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಂಚಾರವನ್ನು ಸುನಮಗೊಳಿಸುತ್ತದೆ.
- 20 ರಸ್ತೆಗಳ ಪುನಶ್ಚೇತನ ಮತ್ತು ಅಗಲೀಕರಣ: ನಗರದ ಮೂಲಸೌಕರ್ಯವನ್ನು ಸುಧಾರಿಸಲು ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
- ಕೈಧಿ ಗ್ರಾಮದ ಸಂಗಮ್ ಘಾಟ್ ರಸ್ತೆ: ಈ ರಸ್ತೆ ಅಭಿವೃದ್ಧಿ ಯೋಜನೆಯು ಸ್ಧಳೀಯ ಪ್ರವಾಸೋದ್ಯವನ್ನು ಉತ್ತೇಜಿಸುತ್ತದೆ.
- ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ವಸತಿ ಕಟ್ಟಡಗಳು: ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಈ ವಸತಿ ಕಟ್ಟಟಗಳು ನಿರ್ಮಿಸಲಾಗುತ್ತಿದೆ.
- ಬನಾರಸ್ ಲೋಕೋಮೋಟಿನ್ ವರ್ಕ್ಸ್ನ 10,000ನೇ ಲೋಕೋಮೋಟಿನ್: ಈ ಸಾಧನೆ ದೇಶದ ರೈಲು ಉದ್ಯಮದಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಿದೆ.
ಈ ಯೋಜನೆಗಳ ಮೂಲಕ ವಾರಣಾಸಿಯ ಮುಲಸೌಕರ್ಯ, ಸಾರಿಗೆ ವ್ಯವಸ್ಧೆ, ಆರೋಗ್ಯ ಸೇವೆಗಳು ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಸುಧಾರಣೆಗಳನ್ನು ಬಯಸಲಾಗಿದೆ
ಸಂಗೀತ
ಆಲ್ಮಾ ನ್ಯೂಸ್ ವಿದ್ಯಾರ್ಥಿ