BengaluruSports

ಆಟೋ ಡ್ರೈವರ್ ಜೊತೆ ಕಿರಿಕ್ ಮಾಡಿಕೊಂಡ ರಾಹುಲ್ ದ್ರಾವಿಡ್: ‘ಇಂದಿರಾನಗರ ಕ ಗುಂಡಾ’ ಮತ್ತೆ ಟ್ರೆಂಡಿಂಗ್!

ಬೆಂಗಳೂರು: ಕ್ರಿಕೆಟ್ ಲೋಕದಲ್ಲಿ ಸದಾ ಶಾಂತ, ಸ್ಥಿರತೆಯ ಸಂಕೇತವಾದ ರಾಹುಲ್ ದ್ರಾವಿಡ್ ಬೆಂಗಳೂರು ರಸ್ತೆಯಲ್ಲಿ ಆಟೋ ಡ್ರೈವರ್ ಜೊತೆ ವಾಗ್ಯುದ್ಧ ನಡೆಸಿದ್ದಾರೆ! ಈ ಘಟನೆ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನಡೆದಿದ್ದು, ಅದೇ ಕ್ಷಣದಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಏನಾಯಿತು?
ಸಾಧಾರಣವಾಗಿ ದೊಡ್ಡ ವಿವಾದಗಳಲ್ಲಿ ಕಾಣಿಸಿಕೊಳ್ಳದ ದ್ರಾವಿಡ್, ಈ ಬಾರಿ ಬೇರೆ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದಾರೆ! ಐಪಿಎಲ್ 2025ರಲ್ಲಿ ಮತ್ತೆ ರಾಜಸ್ಥಾನ್ ರಾಯಲ್ಸ್ ಕೋಚ್ ಆಗಿ ಮರಳಲು ತಯಾರಾಗಿರುವ ದ್ರಾವಿಡ್, ಬೆಂಗಳೂರಿನಲ್ಲಿ ಕೆಲವು ದಿನಗಳ ಕಾಲ ಸಮಯ ಕಳೆದಿದ್ದರು. ಈ ವೇಳೆ, ಅವರ ಕಾರು ಆಟೋ ರಿಕ್ಷಾ ಜೊತೆ ಲಘು ಅಪಘಾತಕ್ಕೀಡಾದ ಬಗ್ಗೆ ವರದಿ ಬಂದಿದೆ.

ವಾಗ್ವಾದದ ಬಗ್ಗೆ ವರದಿ?
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಟೋ ಚಾಲಕ ಒಂದೇಸಮನೆ ಬ್ರೇಕ್ ಹಾಕಿದ ಪರಿಣಾಮ, ದ್ರಾವಿಡ್ ಅವರ ವಾಹನ ಆಟೋಗೆ ಡಿಕ್ಕಿಯಾಗಿದೆ. ಇದರಿಂದ ಸಣ್ಣ ಮಾತಿನ ಚಕಮಕಿಯು ಆರಂಭವಾಯಿತು. ಆದರೆ, ವಿಡಿಯೋದಲ್ಲಿ ಸ್ಪಷ್ಟವಾಗಿ ಮಾತುಗಳು ಕೇಳಿಬಾರದ ಕಾರಣ, ನಿಖರವಾಗಿ ಏನಾಯಿತು ಎಂಬುದು ಇನ್ನೂ ಖಚಿತವಾಗಿಲ್ಲ. ಆದಾಗ್ಯೂ, ಕೆಲವೇ ಕ್ಷಣಗಳಲ್ಲಿ ಆಟೋ ಚಾಲಕ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅದೇ ಸಮಯಕ್ಕೆ ದ್ರಾವಿಡ್ ಸಹ ಆಟೋ ಚಾಲಕರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಅಲ್ಲಿಂದ ತೆರಳಿದ್ದಾರೆ.

‘ಇಂದಿರಾನಗರ ಕ ಗುಂಡಾ’ ಮತ್ತೆ ಟ್ರೆಂಡಿಂಗ್!
ಇದು ವೈರಲ್ ಆದ ಮೇಲೆ, ಸೋಶಿಯಲ್ ಮೀಡಿಯಾದಲ್ಲಿ ಜನರು “ಇಂದಿರಾನಗರ ಕ ಗುಂಡಾ” ಎಂದು ಹಳೇ ಜಾಹೀರಾತನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. 2021ರ CRED ಜಾಹೀರಾತಿನಲ್ಲಿ ದ್ರಾವಿಡ್ ತೀವ್ರ ಕೋಪಕ್ಕೆ ಒಳಗಾಗುವ ದೃಶ್ಯ ಜನಪ್ರಿಯವಾಗಿತ್ತು. ಅದೇ ಶೈಲಿಯಲ್ಲಿ ಈ ಘಟನೆ ಕೂಡಾ ವೈರಲ್ ಆಗಿದ್ದು, ಅಭಿಮಾನಿಗಳು ತಮಾಷೆಯ ಟೀಕೆಗಳನ್ನು ಮಾಡುತ್ತಿದ್ದಾರೆ.

ಪೊಲೀಸರ ಎಚ್ಚರಿಕೆ!
ಈ ಘಟನೆಯ ಕುರಿತಾಗಿ ಈಗಾಗಲೇ ಪೊಲೀಸರು ಗಮನ ಹರಿಸಿದ್ದಾರಂತೆ. ಯಾವುದೇ ದೂರು ಅಥವಾ FIR ದಾಖಲಾಗಿಲ್ಲವಾದರೂ, ವೈರಲ್ ವಿಡಿಯೋ ಇರುವ ಕಾರಣ ವಿಚಾರಣೆ ನಡೆಸಬಹುದು ಎಂಬ ಮಾಹಿತಿ ಲಭ್ಯವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button