ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಮೀಸಲಾತಿ?!
ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ರಾಜ್ಯಗಳ ಪ್ರಯತ್ನಗಳು ಕೋರ್ಟ್ ಮೆಟ್ಟಿಲೇರಿದ್ದರೆ, ಎಸ್ ಸಿ, ಎಸ್ ಟಿ, ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸುವ ಕೇಂದ್ರದ ಪ್ರಸ್ತಾವ ಹಳ್ಳ ಹಿಡಿದಿದೆ.
ಕೇಂದ್ರ ಸರ್ಕಾರವು ಖಾಸಗಿ ವಲಯದಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ದಿಸದಲ್ಲಿ ಕಾರ್ಯವೋಮುಖವಾಗಿತ್ತು. ಹಲೋ ರಾಜ್ಯ ಸರ್ಕಾರಗಳು ಸ್ಥಳೀಯ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಗಳಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಬೇಕೆನ್ನುವ ನೀತಿ ರೂಪಿಸಿದ್ದವು. ಆದರೆ ಕೇಂದ್ರ ಸರ್ಕಾರವಾಗಲಿ, ರಾಜ ಸರ್ಕಾರವಾಗಲಿ ಇದುವರೆಗೂ ನಿರೀಕ್ಷಿತ ಯಶಸ್ಸು ಕಂಡಿಲ್ಲ: ಎಲ್ಲೋ ಖಚಿತ ಕಾರ್ಯಕ್ರಮ ಜಾರಿಯಾಗಿಲ್ಲ. ಖಾಸಗಿ ವಲಯದಲ್ಲಿ ಸಾಮಾಜಿಕ ನ್ಯಾಯದ ಭಾಗವಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ಸಮಲೋಚಿಸಲು ಯುಪಿಎ ಸರ್ಕಾರವು 2006ರಲ್ಲಿ ಸಮನ್ವಯ ಸಮಿತಿ ರಚಿಸಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಬುಡಕಟ್ಟು ವ್ಯವಹಾರಗಳ ಇಲಾಖೆ, ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಕಾರ್ಯದರ್ಶಿಗಳು ಸಮಿತಿಯ ಭಾಗವಾಗಿದ್ದರು ಜೊತೆಗೆ ಭಾರತೀಯ ಕೈಗಾರಿಕೆಗಳ ಒಕ್ಕೂಟ ಭಾರತೀಯ ವಾಣಿಜ್ಯ ಕೈಗಾರಿಕಾ ಮಹಾಮಂಡಳಿ ಉದ್ಯಮ ಕ್ಷೇತ್ರವನ್ನು ಪ್ರತಿನಿಧಿಸಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದವು. ಇದುವರೆಗೂ ಈ ಸಮಿತಿಯು 9 ಬಾರಿ ಸಭೆ ಸೇರಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ. ಸಮಿತಿಯ ಮೊದಲ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯಮಿಗಳು ಸ್ವಯಂ ಪ್ರೇರಿತವಾಗಿ ಕೌಶಲ ತರಬೇತಿ ನೀಡಬೇಕು ಎಂದು ತೀರ್ಮಾನಿಸಲಾಯಿತು. ಈ ಬಗ್ಗೆ ಶಿಕ್ಷಣ, ಉದ್ಯೋಗ ಪಡೆಯುವ ಕೌಶಲ, ಉದ್ಯಮಶೀಲತೆಯನ್ನು ರೂಢಿಸುವುದು ಒಳಗೊಂಡಂತೆ ಉದ್ಯಮಿಗಳಿಗೆ ಸ್ವಯಂ ಪ್ರೇರಿತ ನೀತಿ ಸಂಹಿತೆಯನ್ನು ರೂಪಿಸಲಾಯಿತು. ಸಮಾಜದ ಎಲ್ಲಾ ಜನರನ್ನು ಒಳಗೊಳ್ಳುವ ಸಲುವಾಗಿ ಶಿಷ್ಯ ವೇತನ, ಕೋಚಿಂಗ್, ಉದ್ಯಮಶೀಲತಾ ತರಬೇತಿ, ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ನಡೆಸುವಂತೆ ಮುದ್ದಾದ ಸಂಸ್ಥೆಗಳು ತಮ್ಮ ಸದಸ್ಯ ಕಂಪನಿಗಳಿಗೆ ಸೂಚಿಸಿದವು. ಸಮನ್ವಯ ಸಮಿತಿಯ ಕೊನೆಯ ಅಂದರೆ 9ನೇ ಸಭೆಯಲ್ಲಿಯೂ ಮೀಸಲಾತಿ ನೀಡುವ ದಿಸೆಯಲ್ಲಿ ಒಂದು ಖಚಿತ ರೂಪರೇಷೆ ತಯಾರಿಸಲು ಸಾಧ್ಯವಾಗಲಿಲ್ಲ.
ಉದ್ದಿಮೆಗಳು ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳುವಾಗ ಕನಿಷ್ಠ ಶೇಕಡ 25 ರಷ್ಟು ಎಸ್ ಸಿ, ಎಸ್ ಟಿ ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಈ ಸಭೆಯಲ್ಲಿ ಕೋರಲಾಯಿತು. ಜೊತೆಗೆ ಹಳ್ಳಿಗಳಿಂದ ಬಂದವರಿಗೆ ಆದ್ಯತೆ ನೀಡುವುದು ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳಿಗೆ ಮುಂದಾಗ ಬೇಕೆಂದು ವಾಣಿಜ್ಯೋದ್ಯಮಗಳಿಗೆ ಮನವಿ ಮಾಡಲಾಯಿತು.
ಆದರೆ ಇಷ್ಟೆಲ್ಲ ಆದ ನಂತರವೂ ಖಾಸಗಿ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ ಎನ್ನುವ ಬಗ್ಗೆ ಸರ್ಕಾರದ ಬಳಿ ಯಾವ ಮಾಹಿತಿಯು ಇಲ್ಲ. ಇದನ್ನು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾಗಿದ್ದ ಎ ನಾರಾಯಣಂ ಸ್ವಾಮಿಯವರೆ 2023ರ ಮಾರ್ಚ್ 22 ರಂದು ರಾಜ್ಯಸಭೆಯಲ್ಲಿ ಹಂಚಿಕೊಂಡಿದ್ದಾರೆ.
ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಕೂಡಲು ಆದ್ಯತೆ ನೀಡಬೇಕು ಎಂಬ ನೀತಿಯನ್ನು ಜಾರಿಗೆ ತರಲು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ನಂತಹ ಕೆಲವು ರಾಜ್ಯಗಳು ಈಗಾಗಲೇ ಹಲವು ಬಾರಿ ಪ್ರಯತ್ನ ನಡೆಸಿವೆ. ಕರ್ನಾಟಕದಲ್ಲಿ 1984ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದ ಸರೋಜಿನಿ ಮಹಿಷಿ ವರದಿಯು ಖಾಸಗಿ ಕ್ಷೇತ್ರದಲ್ಲಿ ಶೇಕಡ ನೂರರಷ್ಟು ಸಿ ಮತ್ತು ಡಿ ಶ್ರೇಣಿಯ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕೆಂದು ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವು ಶೇಕಡಾ 80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕೆಂದು ಪ್ರತಿಪಾದಿಸುತ್ತಲೇ ಬಂದಿದೆ.
ಮಹಾರಾಷ್ಟ್ರದಲ್ಲಿ ಖಾಸಗಿ ಕ್ಷೇತ್ರದಲ್ಲಿ ಶೇಕಡ 80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕೆಂಬ ನೀತಿ ಜಾರಿಯಲ್ಲಿದೆ. ಗುಜರಾತ್ ನಲ್ಲಿ 1995ರಲ್ಲಿ ಇಂತಹ ನೀತಿ ರೂಪಿಸಲಾಗಿದೆ. ರಾಜಸ್ಥಾನ ಸರ್ಕಾರವು ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇಕಡಾ 75ರಷ್ಟು ಮೀಸಲಾತಿ ಮತ್ತು ಮಧ್ಯಪ್ರದೇಶ ಸರ್ಕಾರವು ಸ್ಥಳೀಯರಿಗೆ ಶೇಕಡಾ 70ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ಚಿಂತನೆ ನಡೆಸುತ್ತಿವೆ. ಅದನ್ನು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಸಂಬಂಧ, ಆಂಧ್ರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಕಾನೂನು ರೂಪಿಸುವ ಪ್ರಯತ್ನ ನಡೆಸಿವೆ. ಜಾರ್ಖಂಡನ್ನು ಈ ಪ್ರಯತ್ನ ಮಸೂದೆಯ ಹಂತದಲ್ಲಿದೆ.
ಪಂಜಾಬ್ ಹರಿಯಾಣ ಹೈಕೋರ್ಟ್ ತೀರ್ಪು..?
ಕಾಯ್ದೆ ಅ ಸಂವಿಧಾನಿಕ.
ಕಾಯ್ದೆಯು ಭಾರತ ಸವಿಂದಾನದ ಮೂರನೇ ಭಾಗವನ್ನು ಉಲ್ಲಂಘಿಸುತ್ತಿದೆ.
ಅಭ್ಯರ್ಥಿಗಳು ನಿರ್ದಿಷ್ಟ ರಾಜ್ಯಕ್ಕೆ ಸೇರಿಲ್ಲ ಎಂಬ ಕಾರಣದಿಂದ ರಾಜ್ಯದ ಜನರ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ.
ಸಂವಿಧಾನದ 16ನೇ ವಿಧಿಯು ಸಾರ್ವಜನಿಕ ಉದ್ಯೋಗದ ವಿಚಾರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ.
ಕ್ಷೀಣಿಸುತ್ತಿರುವ ಉದ್ಯೋಗವಕಾಶಗಳು.
ಆರ್ಥಿಕ ಉದಾರೀಕರಣ ನೀತಿ ಅಳವಡಿಸಿಕೊಂಡ ನಂತರ ಅನೇಕ ಗೋರಾಷ್ಟ್ರೀಯ ಕಂಪನಿಗಳು ಭಾರತ ಪ್ರವೇಶಿಸಿದವು. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಯಿತು. ಅವುಗಳ ಜೊತೆಯಲ್ಲಿ ಸಾರ್ವಜನಿಕ ವಲಯದ ಅನೇಕ ಉದ್ದಿಮೆಗಳನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡಲಾಯಿತು ಇವುಗಳಿಂದ ಸರ್ಕಾರಿ ಕೆಲಸಗಳು ಕಡಿಮೆಯಾಗಿ, ಖಾಸಗಿ ವಲಯದಲ್ಲಿ ಅಪಾರ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾದವು.
ಭಾರತ ಸಂವಿಧಾನವು ಸರ್ಕಾರಿ ನೌಕರಿಗಳಲ್ಲಿ ಪರಿಶಿಷ್ಟ ಜಾತಿ ಪಂಗಡಗಳು ಮತ್ತು ಹಿಂದುಳಿದ ಜನರಿಗೆ ಉದ್ಯೋಗಗಳಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡುತ್ತಿದೆ. ಆದರೆ ಖಾಸಗಿ ಕ್ಷೇತ್ರದಲ್ಲಿ ಇಂಥ ಯಾವ ಉಪಕ್ರಮವು ಇಲ್ಲ. ಖಾಸಗಿ ಉದ್ಯಮಗಳ ಬೆಳವಣಿಗೆ, ಖಾಸಗೀ ಕರಣ ನೀತಿಗಳು ಎಸ್ಸಿ, ಎಸ್ಟಿ ಒಬಿಸಿ ಜನರ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2021ರ ವರದಿಯ ಪ್ರಕಾರ, 1991 ಮತ್ತು 2012ರ ನಡುವೆ ಆದಂತ ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣದಿಂದ 20 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಿವೆ.
ಅಂಕಣ ಬರಹಗಾರರು- ಜಗದೀಶ್.