Bengaluru

ತುಂಗಭದ್ರಾ ತಳಮಳ: ತಾತ್ಕಾಲಿಕ ಗೇಟ್‌ ಅಳವಡಿಸಲು ಪ್ರಕ್ರಿಯೆ ಆರಂಭ!

ಕೊಪ್ಪಳ: ಕೊಪ್ಪಳ ಜಿಲ್ಲೆಯ ತುಂಗಭದ್ರಾ ಆಣೆಕಟ್ಟೆಯ 33 ಗೇಟ್ಗಳಲ್ಲಿ ಒಂದು ಆಗಸ್ಟ್ 10ರಂದು ಸಂಜೆ ಬಿದ್ದುಹೋಗಿದ್ದು, ಈ ಘಟನೆ ಜಲಾಶಯದ ಮೇಲ್ಭಾಗದ ಪ್ರದೇಶಗಳಿಗೆ ನೀರಿನ ಕೊರತೆಯ ಭೀತಿ ಮೂಡಿಸಿದೆ. ಈ ಘಟನೆಯಿಂದಾಗಿ ಎಚ್ಚರಿಕೆ ಘೋಷಿಸಲಾಗಿದ್ದು, 2/3 ಭಾಗದ ನೀರನ್ನು ಖಾಲಿ ಮಾಡಲು ನಿರ್ಧರಿಸಲಾಗಿದೆ.

ಈ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟು, ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ರ ಜಾಗಕ್ಕೆ ತಾತ್ಕಾಲಿಕ ಗೇಟ್‌ ಅನ್ನು ಅಳವಡಿಸಲು ಕಾರ್ಯ ಆರಂಭಿಸಲಾಗಿದೆ. ನಿನ್ನೆ ಆಗಸ್ಟ್ 15ರಂದು, ಜಿಂದಾಲ್‌ನಿಂದ ಬಂದ ಗೇಟ್‌ಗಳ ಎಲಿಮೆಂಟ್‌ಗಳನ್ನು ಅಣೆಕಟ್ಟೆ ಮೇಲೆ ಹೊತ್ತೊಯ್ಯಲು ಕ್ರೇನ್‌ಗಳು ಮತ್ತು 100ಕ್ಕೂ ಹೆಚ್ಚು ಕಾರ್ಮಿಕರು ಸಿದ್ಧರಾಗಿದ್ದರು.

ಇಂದು, 16 ಟನ್ ತೂಕದ ತಾತ್ಕಾಲಿಕ ಗೇಟ್ ಅನ್ನು ಅಳವಡಿಸಲು ತಂತ್ರಜ್ಞಾನದ ಸಹಾಯದಿಂದ ಸ್ಥಾಪಿಸಲು ಶ್ರಮಿಸಲಾಗುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button