CinemaEntertainment

“ಅಪಾಯವಿದೆ ಎಚ್ಚರಿಕೆ” ಚಿತ್ರದಿಂದ “ಬ್ಯಾಚುಲರ್ಸ್ ಬದುಕು” ಸಾಂಗ್ ಬಿಡುಗಡೆ: ಸ್ಟಾರ್ ನಟರಿಂದ ಪಕ್ಕಾ ಸಪೋರ್ಟ್!

ಬೆಂಗಳೂರು: ಕನ್ನಡದ ಜನಪ್ರಿಯ ಧಾರಾವಾಹಿ “ಅಣ್ಣಯ್ಯ” ಮೂಲಕ ಮನೆಮಾತಾದ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸುತ್ತಿರುವ “ಅಪಾಯವಿದೆ ಎಚ್ಚರಿಕೆ” ಚಿತ್ರದ “ಬ್ಯಾಚುಲರ್ಸ್ ಬದುಕು” ಹಾಡು ಇದೀಗ ಭರ್ಜರಿ ಸದ್ದು ಮಾಡುತ್ತಿದೆ.

ಬ್ಯಾಚುಲರ್ ಸ್ಟಾರ್ ನಟರ ಸಪೋರ್ಟ್:
ಹಾಡು ಬಿಡುಗಡೆ ಸಮಾರಂಭದಲ್ಲಿ ಕನ್ನಡದ ಬ್ಯಾಚುಲರ್ ಸ್ಟಾರ್ ನಟರಾದ ತಿಲಕ್, ರಾಕೇಶ್ ಅಡಿಗ, ನವೀನ್ ಶಂಕರ್ ಹಾಗೂ ವಿಕ್ಕಿ ವರುಣ್ ಭಾಗವಹಿಸಿ, ತಮ್ಮ ಬ್ಯಾಚುಲರ್ ದಿನಗಳ ನೆನಪು ಹಂಚಿಕೊಂಡರು. ಈ ಹಾಡು ಹಾಗೂ ಚಿತ್ರ ಯಶಸ್ವಿಯಾಗಲಿ ಎಂದು ತಮ್ಮ ಹಾರೈಕೆ ನೀಡಿದರು.

ಹೊಸ ನಿರೀಕ್ಷೆ ಮೂಡಿಸಿರುವ ನಿರ್ದೇಶಕ:
ಚಿತ್ರದ ನಿರ್ದೇಶಕರಾಗಿರುವ ಅಭಿಜಿತ್ ತೀರ್ಥಹಳ್ಳಿ ಈ ಹಾಡನ್ನು ಬರೆದಿದ್ದು, ತಮ್ಮ ಬೆಂಗಳೂರು ಬ್ಯಾಚುಲರ್ ಜೀವನವೇ ಗೀತರಚನೆಗೆ ಸ್ಪೂರ್ತಿ ಎಂದು ಹೇಳಿದರು. “ಇದು ಸಸ್ಪೆನ್ಸ್ ಥ್ರಿಲ್ಲರ್ ಆದರೆ ಎಲ್ಲರಿಗು ಬೇಕಾದ ಎಂಟರ್‌ಟೈನ್‌ಮೆಂಟ್ ತುಂಬಿದ ಚಿತ್ರ” ಎಂದು ಅವರು ಆಶ್ವಾಸನೆ ನೀಡಿದರು.

ನಾಯಕನ ಸ್ಪಷ್ಟ ಮಾತು:
ಹಾಡಿನ ಬಿಡುಗಡೆ ನಂತರ ನಟ ವಿಕಾಶ್ ಉತ್ತಯ್ಯ ಮಾತನಾಡಿ, “ನಮ್ಮ ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಇದು ಹಾರರ್ ಥ್ರಿಲ್ಲರ್ ಎಂದು ಹಲವರಿಗೆ ಅನಿಸಿತ್ತು. ಆದರೆ ‘ಬ್ಯಾಚುಲರ್ಸ್ ಬದುಕು’ ಹಾಡು ನೋಡಿ ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎಂಬುದು ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

ಚಿತ್ರತಂಡದ ವಿಶ್ವಾಸ:
ನಿರ್ಮಾಪಕ ಮಂಜುನಾಥ್ ಅವರು ಹೊಸ ತಂಡಕ್ಕೆ ಬೆಂಬಲ ನೀಡಿದ ಕಲಾವಿದರಿಗೆ ಧನ್ಯವಾದ ತಿಳಿಸಿದರು. “ಈ ಚಿತ್ರ ಗೆಲ್ಲುವ ವಿಶ್ವಾಸ ನಮ್ಮಲ್ಲಿ ಇದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಬೇಕು” ಎಂದು ಮನವಿ ಮಾಡಿದರು.

ಸಂಗೀತದ ಜಾದು:
ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರ ಮ್ಯೂಸಿಕ್ ಕೂಡ ಈ ಹಾಡಿಗೆ ಹೆಚ್ಚುವರಿ ಶಕ್ತಿಯಾಗಿದ್ದು, ಹಾಡು ಪ್ರೇಕ್ಷಕರ ಮನಗೆಲ್ಲುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button