“ಜೈ ಕಿಸಾನ್” ನವೆಂಬರ್ 7ಕ್ಕೆ ಬಿಡುಗಡೆ: ರೈತನ ಮಗನ ಸಿನಿಮಾಗೆ ಕೈಹಿಡಿಯುವನೇ ಕನ್ನಡಿಗ..?!

ಬೆಂಗಳೂರು: ನವೆಂಬರ್ 7, 2024, ಕನ್ನಡ ಚಿತ್ರರಂಗದಲ್ಲಿ “ಜೈ ಕಿಸಾನ್” ಎಂಬ ಚಿತ್ರ ಬಿಡುಗಡೆಯಾಗಲಿದೆ. ಮರಾಠಿಯಲ್ಲಿ ಈಗಾಗಲೇ ಸೂಪರ್ಹಿಟ್ ಆಗಿರುವ ಈ ಚಿತ್ರ, ರೈತರ ಜೀವನದ ನಿಜವಾದ ಸಂಕಷ್ಟ ಮತ್ತು ಹೋರಾಟವನ್ನು ಆಧರಿಸಿದೆ. ಈ ಚಿತ್ರವನ್ನು ಮಹಾರಾಷ್ಟ್ರ ಮೂಲದ ನಿರ್ಮಾಪಕ ಹಾಗೂ ಕಥೆಗಾರ ರವಿ ನಾಗಪುರೆ ಬರೆದಿದ್ದು, ರೈತರ ಹೋರಾಟ, ಮಣ್ಣಿನ ಜೊತೆ ನಂಟು, ಮತ್ತು ಆಧುನಿಕ ಕೃಷಿಯ ಮಹತ್ವವನ್ನು ಕಲೆಹಾಕಿದೆ.
ಮರಾಠಿಯಿಂದ ಕನ್ನಡಕ್ಕೆ:
ಮೂಡಲಿಂಗನಹಳ್ಳಿ, ವಿಜಾಪುರ ಮೂಲದ ನಾಗರಾಜ್, ಈ ಚಿತ್ರವನ್ನು ಕನ್ನಡಕ್ಕೆ ತಂದಿದ್ದು, ಕನ್ನಡಿಗರಿಗೆ ರೈತರ ಜೀವನದ ದುಃಖ, ಸಂಕಷ್ಟ, ಹಾಗೂ ಹೋರಾಟವನ್ನು ಚಿತ್ರದಲ್ಲಿ ಪ್ರದರ್ಶಿಸಲು, ಚಿತ್ರ ನವೆಂಬರ್ 7ರಂದು ಕನ್ನಡದ ರಂಗಮಂದಿರಗಳಿಗೆ ಬರುತ್ತಿದೆ. ಆಗಸ್ಟ್ ನಲ್ಲಿ ಮರಾಠಿಯಲ್ಲಿ ಬಿಡುಗಡೆಯಾಗಿ ಉತ್ತಮ ಅಭಿಪ್ರಾಯ ಗಳಿಸಿದ ಈ ಚಿತ್ರ, ಈಗ ಕನ್ನಡಿಗರ ಹೃದಯ ಗೆಲ್ಲಲು ಬರುತ್ತಿದೆ.
ಚಿತ್ರದ ಕಥಾಹಂದರ:
“ಜೈ ಕಿಸಾನ್” ಚಿತ್ರದಲ್ಲಿ, ವಿದ್ಯಾವಂತ ಯುವಕನು ತನ್ನ ಕುಟುಂಬದ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಆಧುನಿಕ ಕೃಷಿಯ ಮೂಲಕ ಬೇರೆಯವರಿಗೆ ಮಾದರಿಯಾಗುವ ಹೋರಾಟವನ್ನು ಕಟ್ಟಿಕೊಡಲಾಗಿದೆ. ಮುಖ್ಯ ಪಾತ್ರದಲ್ಲಿ ನಟಿಸಿದ ಜನುಮೇಜಯ್ ತೆಲಂಗ್ ಹಾಗೂ ನಾಯಕಿ ತನ್ವಿ ಸಾವಂತ್ ರೈತರ ಸಂಕಷ್ಟವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ರೈತನ ಮಗನ ಸಿನಿಮಾ:
“ನಾನು ಒಬ್ಬ ರೈತನ ಮಗ. ರೈತರ ಬಾಳಿನ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ,” ಎಂದು ರವಿ ನಾಗಪುರೆ ತಮ್ಮ ಸ್ಫೂರ್ತಿ ಹಂಚಿಕೊಂಡಿದ್ದಾರೆ. “ಹಿರಿಯರು ತಮ್ಮ ಮಕ್ಕಳನ್ನು ಕೃಷಿಯ ಕಡೆ ತಿರುಗಿಸಬೇಕು, ಜನರು ರೈತರನ್ನು ಗೌರವದಿಂದ ನೋಡಬೇಕು,” ಎಂದು ಹೇಳಿದ ಅವರು, ಈ ಚಿತ್ರ ಕನ್ನಡದ ರೈತರಿಗೆ ಹಿಡಿಸುವ ಆಶಯವನ್ನು ವ್ಯಕ್ತಪಡಿಸಿದರು.
ನೀವು ಮಿಸ್ ಮಾಡದ ಸಿನಿಮಾ:
ಕಥೆಯಲ್ಲಿ, ಓದಿದ್ದು ಸಾಕಷ್ಟು ಇದ್ದರೂ, ರೈತನಾಗಿ ಕೃಷಿ ಮಾಡುವ ಈ ಯುವಕನ ಹೋರಾಟ, ಆಧುನಿಕ ಕೃಷಿ ಮೂಲಕ ಪಡೆದ ಯಶಸ್ಸು, ಮತ್ತು ಜೀವನದ ಸಂಕಷ್ಟಗಳನ್ನು ಚಿತ್ರಿಸುತ್ತಿದ್ದು, ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ.
ರೈತರ ಬಾಳು ಮತ್ತು ಹೋರಾಟವನ್ನು ಕಣ್ತುಂಬಿಕೊಳ್ಳಲು ಇಚ್ಛಿಸುವವರಿಗೆ, “ಜೈ ಕಿಸಾನ್” ಚಿತ್ರವನ್ನು ತಪ್ಪದೆ ನೋಡಬೇಕೆಂದು ನಿರ್ದೇಶಕ ವಿಕಾಸ್ ವಿಲಾಸ್ ಮಿಸಾಲ್ ತಿಳಿಸಿದ್ದಾರೆ.