ಇನ್ನು 6 ತಿಂಗಳೊಳಗೆ ಬಾಂಗ್ಲಾದಲ್ಲಿ ಚುನಾವಣೆ…!

ನಮಗೆಲ್ಲ ಗೊತ್ತಿರುವಂತೆ ಸದ್ಯ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಆಡಳಿತದಲ್ಲಿದೆ. ದೇಶದ ತಕ್ಕಡಿಯನ್ನು ಯುನಸ್ ಹೊತ್ತುಕೊಂಡಿದ್ದಾರೆ. ಯುನಸ್ ಸಾಮಾನ್ಯ ವ್ಯಕ್ತಿಯಲ್ಲ, ತನ್ನ ಕೈಗೆ ಅಧಿಕಾರ ಬರುತ್ತಿದ್ದಂತೆ ಸರ್ವಾಧಿಕಾರಿ ರೀತಿ ವರ್ತನೆ ಮಡುವುದಕ್ಕೆ ಶುರು ಮಾಡಿದ್ದ ಈ ಯುನಸ್, ಚುನಾವಣೆ ಯಾವಾಗ ಮಾಡುತ್ತೀರ ಎಂದು ಕೇಳಿದರೆ “ಸದ್ಯಕ್ಕಂತು ಚುನಾವಣೆ ಮಾಡುವ ವಿಚಾರವಿಲ್ಲ, ನಾನು ಒಮ್ಮೆ ದೇಶವನ್ನು ಸರಿ ಮಾಡುತ್ತೇನೆ, ಎಲ್ಲಾ ಸರಿ ಮಾಡಿದ ಮೇಲೆ ಚುನಾವಣೆಯ ವಿಷಯವನ್ನು ನೋಡೋಣ” ಎಂದು ಹೇಳಿದರು. ಈ ಮೂಲಕ ಇರುವಷ್ಟು ದಿನ ಅಧಿಕಾರವನ್ನು ಅನುಭವಿಸೋಣ ಎನ್ನುವುದು ಆತನ ಯೋಜನೆ ಆಗಿತ್ತು. ಆದರೆ ಈಗ ಯುನಸ್ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಯುನಸ್ ಈ ರೀತಿಯ ನಿರ್ಧಾರವನ್ನು ಪ್ರಕಟ ಮಾಡುತ್ತಿದ್ದಂತೆ ಬಾಂಗ್ಲಾ ಸೇರಿದಂತೆ ಇಡೀ ಜಗತ್ತಿಗೆ ಆಶ್ಚರ್ಯವಾಗಿದೆ. ಇದರ ನಡುವೆ ಯುನಸ್ನ ತರಾತುರಿಯ ನಿರ್ಧಾರದ ಹಿಂದೆ ಇರುವ ಅಸಲಿ ಸತ್ಯ ಏನು ಅನ್ನುವುದು ಈಗ ಗೊತ್ತಾಗಿದೆ. ʼಭಾರತದ ಒತ್ತಡವೇ ಯುನಸ್ ಬಾಂಗ್ಲಾದಲ್ಲಿ ಚುನಾವಣೆ ಘೋಷಣೆ ಮಾಡುವುದಕ್ಕೆ ಕಾರಣʼ. ಭಾರತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತೆ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಅಷ್ಟಕ್ಕೂ ಬಾಂಗ್ಲಾದಲ್ಲಿ ಚುನಾವಣೆ ಘೋಷಣೆ ಆಗುವುದಕ್ಕೂ ಏನು ಸಂಬಂಧ, ಈ ನಿರ್ಧಾರದ ಹಿಂದೆ ಭಾರತದ ಒತ್ತಡ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ, ಬಾಂಗ್ಲಾ ಮಧ್ಯಂತರ ಸರ್ಕಾರದ ನಾಯಕ ಭಾರತವನ್ನು ಕಂಡರೆ ಭಯಪಡುತ್ತಿರುವುದು ಏಕೆ ಎಂಬುದನ್ನು ತಿಳಿಯೋಣ.

ಬಾಂಗ್ಲಾದಲ್ಲಿ ದೊಡ್ಡಮಟ್ಟದ ಬೆಳವಣಿಗೆಗಳು ನಡೆಯುತ್ತಾ ಇದೆ. ಮಧ್ಯಂತರ ಸರ್ಕಾರದ ನಾಯಕತ್ವವನ್ನು ವಹಿಸಿಕೊಂಡಿರುವ ಯುನಸ್ ತನ್ನ ಮನಸ್ಸಿಗೆ ಬಂದ ಹಾಗೆ ನಿಯಮಗಳನ್ನು ಮಾಡುತ್ತಾ ಇದ್ದಾರೆ. ಶೇಕ್ ಹಸೀನಾ ಆಡಳಿತ ಸರಿಯಿಲ್ಲ ಎಂದು ದೇಶದಿಂದಲೇ ಓಡಿಸಿದ ಅಲ್ಲಿನ ಜನ ಈಗ ಸರ್ವಾಧಿಕಾರದ ಆಡಳಿತವನ್ನು ನೋಡುತ್ತಿದ್ದಾರೆ. ಚುನಾವಣೆಯ ಬಗ್ಗೆ ಎಷ್ಟೇ ಕೇಳಿದರೂ ಮಾತನಾಡದ ಯುನಸ್ ಈಗ ಇನ್ನು 6 ತಿಂಗಳ ಅವಧಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಯುನಸ್ ಈ ರೀತಿ ಬದಲಾಗುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರ ಭಾರತ. ಭಾರತ ಹೇಳಿದಂತೆ ಕೇಳದಿದ್ದರೆ ಬಾಂಗ್ಲಾದ ಪತನ ಆಗುತ್ತದೆ ಎಂದು ಯುನಸ್ಗೆ ಈಗ ಅರ್ಥವಾಗಲು ಶುರುವಾಗಿದೆ.
ಬಾಂಗ್ಲಾ ಭಾರತದ ನೆರೆಯ ದೇಶ, ನಮ್ಮ ನೆರೆಯ ದೇಶದಲ್ಲಿ ಸರ್ಕಾರಗಳು ಇಲ್ಲವಾದರೆ ನಮಗೂ ಅದರಿಂದ ಸಮಸ್ಯೆ ಆಗುತ್ತದೆ. ಬಾಂಗ್ಲಾ ಸರ್ಕಾರ ಇಲ್ಲದ ಕಾರಣ ಭಯೋತ್ಪಾದಕರ ಅಟ್ಟಹಾಸ ಜೋರಾಗಿದೆ. ಹೀಗಾಗಿ ನೆರೆಯ ರಾಷ್ಟ್ರದಲ್ಲಿ ಸ್ಥಿರತೆ ಇರುವುದು ತುಂಬಾ ಮುಖ್ಯ ಹೀಗಾಗಿ ಭಾರತ ಬಾಂಗ್ಲಾಗೆ ಒತ್ತಡವನ್ನು ಹಾಕಿದೆ. ಭಾರತದ ಮಾತನ್ನು ಬಾಂಗ್ಲಾ ಕೇಳಲೇಬೇಕು, ಬಾಂಗ್ಲಾಗೆ ಭಾರತ ಎಂದರೆ ಭಯವಷ್ಟೇ ಅಲ್ಲ ನಡುಕ ಕೂಡ, ಅದಕ್ಕೆ ಕಾರಣಗಳಿವೆ. ಬಾಂಗ್ಲಾ ಹಲವಾರು ವಿಚಾರಗಳಲ್ಲಿ ಭಾರತವನ್ನೇ ಅವಲಂಭಿಸಿದೆ. ವಿದ್ಯುತ್ನಿಂದ ಹಿಡಿದು ಕೆಲವು ಮೂಲಭೂತ ಸೌಕರ್ಯಗಳನ್ನು ಭಾರತವೇ ಬಾಂಗ್ಲಾಗೆ ಒದಗಿಸುತ್ತಿರುವುದು. ಹಿಂದಿನ ಸರ್ಕಾರದ ಜೊತೆ ಹಲವು ಒಪ್ಪಂದಗಳನ್ನೂ ಸಹ ಭಾರತ ಸರ್ಕಾರ ಮಾಡಿಕೊಂಡಿದೆ, ಹಲವು ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಕೂಡ ಭಾರತ ಬಾಂಗ್ಲಾದ ಜೊತೆ ಕೈಜೋಡಿಸಿತ್ತು. ಈ ಎಲ್ಲಾ ಕೆಲಸಗಳು ಈಗ ಅರ್ಧದಲ್ಲಿ ನಿಂತಿವೆ, ʼಈ ಎಲ್ಲಾ ಕೆಲಸಗಳು ಮತ್ತೆ ಶುರುವಾಗಬೇಕಾದರೆ ನಮ್ಮಿಂದ ನಿಮಗೆ ನೆರವು ಬೇಕು, ಹೀಗಾಗಿ ಆದಷ್ಟು ಬೇಗ ಚುನಾವಣೆ ಶುರು ಮಾಡಿ, ಸರ್ಕಾರ ಆಡಳಿತಕ್ಕೆ ಬರಲಿ, ಆ ಸರ್ಕಾರದ ಜೊತೆ ನಾವು ಮಾತು-ಕಥೆ ಮಾಡುತ್ತೇವೆ, ನಿಮ್ಮ ಮಧ್ಯಂತರ ಸರ್ಕಾರದ ಜೊತೆ ಯಾವ ಸಂಬಂಧವೂ ನಮಗಿಲ್ಲʼ ಎಂದು ಸ್ಪಷ್ಟವಾಗಿ ಭರತ ಹೇಳಿಬಿಟ್ಟಿದೆ. ಭಾರತ ಹೀಗೆ ಹೇಳುತ್ತಿದ್ದಂತೆ ಇನ್ನು 6 ತಿಂಗಳಲ್ಲಿ ಚುನಾವಣೆ ನಡೆಯುತ್ತದೆ ಎಂದು ಯುನಸ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಭಾರತ ಒತ್ತಡ ಹಾಕಿದ ಪರಿಣಾಮ ಅಮೆರಿಕಾ ಹಾಗೂ ಬ್ರಿಟನ್ ಕೂಡ ಒತ್ತಡ ಹೇರೋಕೆ ಶುರು ಮಾಡಿದ್ದಾರೆ. ಮಧ್ಯಂತರ ಸರ್ಕಾರವೇ ಆಡಳಿತದಲ್ಲಿ ಇದ್ದರೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತವೆ, ಹೀಗಾಗಿ ಆದಷ್ಟು ಬೇಗ ಚುನಾವಣೆಯನ್ನು ನಡೆಸಿ ಎಂದು ಅಮೆರಿಕಾ ಕೂಡ ಒತ್ತಡ ಹಾಕಿತ್ತು. ಇನ್ನು ಅಮೆರಿಕಾದಲ್ಲಿ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಾರೆ, ಟ್ರಂಪ್ ಸಂಪುಟದಲ್ಲಿ ಭಾರತದ ಜೊತೆ ಒಡನಾಟವಿದೆ, ಹಾಗಾಗಿ ಬಾಂಗ್ಲಾಗೆ ಬೆಂಬಲ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಹೀಗಾಗಿ ಬೇರೆ ದಾರಿ ಕಾಣದ ಯುನಸ್ ಕೊನೆಗೂ ಚುನಾವಣೆ ನಡೆಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ಬಾಂಗ್ಲಾದಲ್ಲಿರುವ ರಾಜಕೀಯ ಪಕ್ಷಗಳು ಕೂಡ ಆದಷ್ಟು ಬೇಗ ಚುನಾವಣೆ ಮಾಡಬೇಕು ಎಂದು ಒತ್ತಡ ಹಾಕುತ್ತಿವೆ.

ಇನ್ನು ನಮ್ಮ ದೇಶದ ಪ್ರಧಾನಿ ಮೋದಿ ಮಾಡಿದ ಪೋಸ್ಟ್ ಬಾಂಗ್ಲಾದಲ್ಲಿ ಕಿಡಿ ಹೊತ್ತಿಸಿದೆ. ಪ್ರಧಾನಿ ಮೋದಿ ʼವಿಜಯ್ ದಿವಸʼದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು 1971ರ ಪಾಕಿಸ್ತಾನದ ವಿರುದ್ಧದ ಗೆಲುವಿಗಾಗಿ ಪ್ರತಿವರ್ಷ ಭಾರತ ವಿಜಯ್ ದಿವಸವನ್ನು ಆಚರಿಸುತ್ತದೆ. (1971ಕ್ಕೂ ಮುನ್ನ ಬಾಂಗ್ಲಾ ಎನ್ನುವ ದೇಶವೇ ಇರಲಿಲ್ಲ, ಅದು ಪೂರ್ವ ಪಾಕಿಸ್ತಾನವಾಗಿತ್ತು, ಪಾಕಿಸ್ತಾನವೇ ಇಲ್ಲಿ ಆಳ್ವಿಕೆ ನಡೆಸುತ್ತಿತ್ತು. ಒಂದು ಮೂಲೆಯಲ್ಲಿ ಸರ್ಕಾರ ಇದ್ದುಕೊಂಡು ಇನ್ನೊಂದು ಮೂಲೆಯಲ್ಲಿರುವ ಬಾಂಗ್ಲಾದಲ್ಲಿ ಆಡಳಿತ ನಡೆಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪಾಕಿಸ್ತಾನವು ಪೂರ್ವ ಪಾಕಿಸ್ತಾನದಲ್ಲಿರುವ ಜನರನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಈಗಿನ ಬಾಂಗ್ಲಾ ಜನರ ಮೇಲೆ ದೌರ್ಜನ್ಯ ಮಾಡುತ್ತಿತ್ತು. ಈ ದೌರ್ಜನ್ಯ ಮಿತಿಮೀರಿದಾಗ ಪೂರ್ವ ಪಾಕಿಸ್ತಾನದ ಜನರ ಸಹಾಯಕ್ಕೆ ಬಂದಿದ್ದು ನಮ್ಮ ಭಾರತ. ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ತೆಗೆದುಕೊಂಡು ಬಾಂಗ್ಲಾದಲ್ಲಿ ಪಾಕಿಸ್ತಾನದ ಸೇನೆಯ ಮೇಲೆ ಯುದ್ಧ ಘೋಷಣೆ ಮಾಡುತ್ತಾರೆ. ಭಾರತ ಬಾಂಗ್ಲಾದ ಪರ ನಿಂತ ತಕ್ಷಣ ಪಾಕಿಸ್ತಾನಕ್ಕೆ ಬಾಂಗ್ಲಾದಲ್ಲಿ ಹೆಚ್ಚು ದಿನ ಇರುವುದಕ್ಕೆ ಆಗಲಿಲ್ಲ, ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲಾಗುತ್ತದೆ. ಇದರಿಂದ ಬಾಂಗ್ಲಾ ಎನ್ನುವ ಹೊಸ ದೇಶ ಉದಯವಾಗುತ್ತದೆ. ಇದನ್ನೇ ʼವಿಜಯ್ ದಿವಸ್ʼ ಎಂದು ನಾವು ಆಚರಣೆ ಮಾಡುತ್ತೇವೆ. ಈ ದಿನ ಬಾಂಗ್ಲಾ ಎನ್ನುವ ದೇಶ ಇದೆ ಎಂದರೆ ಅದಕ್ಕೆ ಮುಖ್ಯ ಕಾರಣ ಭಾರತ. ಭಾರತ ಅಂದು ಪಾಕಿಸ್ತಾನದ ವಿರುದ್ಧ ಹೋರಾಡದಿದ್ದರೆ ಬಾಂಗ್ಲಾ ಇಂದು ಕೂಡ ನರಳಬೇಕಾಗಿತ್ತು). ಈ ʼವಿಜಯ್ ದಿವಸ್ʼನ ಅಂಗವಾಗಿ ಮೋದಿ ಪೋಸ್ಟ್ ಮಾಡಿದ್ದರು, ಈ ಪೋಸ್ಟ್ನಲ್ಲಿ ವೀರಯೋಧರ ತ್ಯಾಗವನ್ನು ಸ್ಮರಿಸಿದರು. ಈ ಪೋಸ್ಟ್ ಅನ್ನು ನೋಡಿದ ಬಾಂಗ್ಲಾ ಜನರು ಪ್ರತಿಕ್ರಿಯೆ ಕೊಟ್ಟಿದ್ದಾರೆ “ಅಂದು ಗೆದ್ದಿದ್ದು ನೀವಲ್ಲಾ, ನಾವು ಗೆದ್ದಿದ್ದು. ನಮ್ಮ ಗೆಲುವನ್ನು ನೀವು ಸಂಭ್ರಮಿಸುತ್ತಿರುವುದು ಏಕೆ, ಅಂದು ನೀವು ನಮಗೆ ಸಹಾಯ ಮಾಡಿದ್ದು ಅಷ್ಟೇ, ಯುದ್ಧ ಮಾಡಿದ್ದು ನಾವೇ, ನಾವೇ ಹೋರಾಟವನ್ನು ಮಾಡಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.
ಇದರಿಂದ ಮೋದಿ ಬಾಂಗ್ಲಾದಲ್ಲಿ ಚುನಾವಣೆ ನಡೆಯಲೇಬೇಕು ಎಂದು ಯುನಸ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಹೇಮ ಎನ್ ಜೆ
ಅಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ